24.7.16

ಅಕ್ಷರ ದಾಸೋಹ

💐💐ಅಕ್ಷರ ದಾಸೋಹ 💐💐💐★ಅಕ್ಷರ ದಾಸೋಹ ಕಾರ್ಯಕ್ರಮದ ಅನುಷ್ಠಾನಕ್ಕೆ ಈ ಕೆಳ ಕಾಣಿಸಿದ ಅಂಶಗಳನ್ನುಅಳವಡಿಸಿಕೊಳ್ಳುವುದು.
*************************************************

★ಮುಖ್ಯ ಶಿಕ್ಷಕರು ಸರಕಾರಿ ರಜೆ ಹೊರತುಪಡಿಸಿ ಯಾವುದೇ ಕಾರಣಕ್ಕೂ ಅಕ್ಷರದಾಸೋಹ ಕಾರ್ಯಕ್ರಮ ನಿಲ್ಲದಂತೆ ಮುಂಜಾಗ್ರತೆವಹುಸಬೇಕು.

★ಮುಖ್ಯ ಶಿಕ್ಷಕರು ಪ್ರತಿ ತಿಂಗಳು ಅಗತ್ಯವಿರುವ ಆಹಾರ ಮತ್ತು ಸಾದಿಲ್ವಾರು ಬೇಡಿಕೆಗಳನ್ನು ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿ ಹಿಂದಿನ ತಿಂಗಳ ಉಪಯೋಗತಾ ಪ್ರಮಾಣಪತ್ರದೊಂದಿಗೆ ಪ್ರತಿ ತಿಂಗಳು 25 ನೇ ತಾರೀಖಿನೊಳಗಾಗಿ ತಾಲೂಕು ಕಛೇರಿಗೆ ತಲುಪಿಸಬೇಕು.

★ನಿಗದಿತ ಅವಧಿಯಲ್ಲಿ ಆಹಾರ ಸಾಮಗ್ರಿಗಳು ಪೂರೈಕೆಯಾಗದಿದ್ದಲ್ಲಿ,ಸ್ಥಳಿಯವಾಗಿ ಲಭ್ಯವಾಗುವ ಆಹಾರ ಸಾಮಗ್ರಿಗಳನ್ನು ಬಳಸಿಕೊಂಡು ಮಕ್ಕಳಿಗೆ ಆಹಾರ ವಿತರಣೆ ಮಾಡಬೇಕು.ಯಾವುದೇ ಕಾರಣಕ್ಕೂ ಮಕ್ಕಳು ಹಸಿವಿನಿಂದ ಉಳಿಯಬಾರದು.

★ಕಳಪೆ ಮಟ್ಟದ ಆಹಾರ ಸಾಮಗ್ರಿಗಳನ್ನು ಸ್ವೀಕರಿಸಬಾರದು.ಹಾಗೂ ಒಂದು ವೇಳೆ ಕಳಪೆ ಮಟ್ಟದ ಆಹಾರ ಸಾಮಗ್ರಿ ಬಳಸಿ ಬಿಸಿಊಟ ತಯಾರಿಸಬಾರದು.

★ಪ್ರತಿ ತಿಂಗಳು ಪಡೆದ ಆಹಾರ ಧಾನ್ಯಗಳು ಕೆಡದಂತೆ ಶೇಕರಿಸಿಟ್ಟುಕೊಳ್ಳಬೇಕು.

★ನಮೂನೆ-2 ರಲ್ಲಿದ್ದ ಆಹಾರ ದಾಸ್ತಾನಿಗೂ ಹಾಗೂ ಭೌತಿಕ ದಾಸ್ತಾನಿಗೂ ತಾಳೆಯಾಗಬೇಕು.ವ್ಯತ್ಯಾಸ ಕಂಡುಬಂದಲ್ಲಿ ಮುಖ್ಯಶಿಕ್ಷಕರೇ ಜವಾಬ್ದಾರರಾಗಿರುತ್ತಾರೆ.

★ಅಕ್ಷರ ದಾಸೋಹಕ್ಕೆ ಸಂಬಂಧಿಸಿದಂತೆ,ಎಲ್ಲಾ ಮಾಹಿತಿಗಳನ್ನು/ವಹಿಗಳನ್ನು ಪ್ರತಿನಿತ್ಯ ನಿರ್ವಹಿಸಬೇಕು.

★ಪ್ರತಿದಿನ ಮಕ್ಕಳಿಗೆ ಆಹಾರ ವಿತರಿಸುವ ಮುಂಚೆ ಇಬ್ಬರು ಶಿಕ್ಷಕರು ಆಹಾರ ಸೇವಿಸಿ ಉತ್ತಮ ಗುಣಮಟ್ಟದ ಆಹಾರವೆಂದು ದೃಢೀಕರಿಸಿದ ನಂತರ ವಹಿಯಲ್ಲಿ ದಾಖಲಿಸಿ ಮಕ್ಕಳಿಗೆ ವಿತರಿಸಬೇಕು.

★ಅನಿಲ ಸಿಲಿಂಡರನ್ನು ಮಿತವಾಗಿ ಬಳಸಬೇಕು.ಸಿಲಿಂಡರ್ ಸ್ವೀಕರಿಸುವಾಗ ರಿಜಿಸ್ಟರ್ ನಂಬರ್ ಬರೆದುಕೊಳ್ಳಬೇಕು.
ಕಳ್ಳತನವಾಗದಂತೆ ನೋಡಿಕೊಳ್ಳಬೇಕು.

★ಮಾತ್ರೆಗಳನ್ನು ನಿಗದಿತ ಅವಧಿಯಲ್ಲಿ ಮಕ್ಕಳಿಗೆ ನೀಡಬೇಕು.ಹಾಗೂ ವರ್ಗವಾರು ನೀಡಿದ ಮಾತ್ರೆಗಳ ದಾಖಲೆಗಳನ್ನಿಡಬೇಕು.

★ತಾಯಂದಿರ ಸಮೀತಿಯನ್ನು ರಚಿಸಿ ವಾರ್ಷಿಕ ವೇಳಾಪಟ್ಟುಯಂತೆ ಕನಿಷ್ಟ 4 ಜನ ತಾಯಂದಿರು ಸರದಿಯ ಮೇಲೆ ಅಕ್ಷರ ದಾಸೋಹ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮಾಡುವುದು.

★ಮಕ್ಕಳಿಗೆ ಬಿಸಿಯೂಟ ವಿತರಿಸುವಾಗ ಎಲ್ಲ ಶಿಕ್ಷಕರು ತಪ್ಪದೇ ಹಾಜರಿದ್ದು,ಶಿಸ್ತಿನಿಂದ ವ್ಯವಸ್ಥಿತವಾಗಿ ಮಕ್ಕಳಿಗೆ ಆಹಾರ ವಿತರಣೆ ಮಾಡಬೇಕು.

★ಅಡುಗೆ ಕೋಣೆಯನ್ನು ಪಾತ್ರೆಪರೀಕರಗಳನ್ನು ಅಡುಗೆ ಪ್ರಾರಂಭದ ಮುನ್ನ ಮತ್ತು ಮುಗಿದ ನಂತರ ಸ್ವಚ್ಚಗೊಳುಸಬೇಕು.

★ಪ್ರತಿ ಶಾಲೆಯಲ್ಲಿ ಶಾಲಾ ಕೈತೋಟ ನಿರ್ವಹಿಸಬೇಕು.
ಹಾಗೂ ಕೈತೋಟದಲ್ಲಿ ಬೆಳೆದ ತರಕಾರಿಗಳನ್ನು ಬಿಸಿಯೂಟಕ್ಕೆ ಬಳಸಿಕೊಳ್ಳಬೇಕು.

★ಅಕ್ಷರದಾಸೋಹ ಕಾರ್ಯಕ್ರಮದಡಿ ಖರ್ಚುಮಾಡಿದ ಪ್ರತಿಯೊಂದು ಅನುದಾನಕ್ಕೆ ಓಚರ್ಗಳನ್ನು ನಿಯಮಾನುಸಾರ ನಿರ್ವಹಿಸಿ ನಗದು ಪುಸ್ತಕವನ್ನು ಪ್ರತಿನಿತ್ಯ ನಿರ್ವಹಿಸಬೇಕು.

★ಪ್ರತಿವರ್ಷದ ಕೊನೆಗೆ ಅಕ್ಷರ ದಾಸೋಹ ದಾಖಲೆಗಳನ್ನು ಓಚರ್ ಸಹಿತ ಕಾಟನ್ ಬಟ್ಟೆಯಲ್ಲಿ ಬಂಡಲ್ ಮಾಡಿ ಇಡಬೇಕು.

★ರಜಾ ದಿನಗಳಲ್ಲಿ ಸಿಲಿಂಡರಗಳು ಹಾಗೂ ಆಹಾರ ಧಾನ್ಯಗಳು ಕಳ್ಳತನವಾಗದಂತೆ ಮುಂಜಾಗ್ರತೆವಹಿಸಬೇಕು.

★ಅರ್ಧವಾರ್ಷಿಕ ಹಾಗೂ ವಾರ್ಷಿಕ ರಜೆಗಳಲ್ಲಿ ಆಹಾರ ಧಾನ್ಯಗಳ ದಾಸ್ತಾನು ಉಳಿಯದಂತೆ ಬೇಡಿಕೆಯನ್ನು ಸಲ್ಲಿಸಬೇಕು.ಬೇಡಿಕೆಯಿಲ್ಲದಿದ್ದರೂ ಶೂನ್ಯವರದಿಯನ್ನು ಸಲ್ಲಿಸಬೇಕು.

★ದಾನಿಗಳ ಮನವೊಲಿಸಿ ಅಕ್ಷರದಾಸೋಹ ಕಾರ್ಯಕ್ರಮಕ್ಕೆ ಬೇಕಾಗುವ ಕುಕ್ಕರ್,ತಟ್ಟೆ,ಲೋಟ,ಬಕೀಟ
ಇತ್ಯಾದಿಗಳನ್ನು ಪಡೆಯಲು ಶ್ರಮಿಸಬೇಕು.

★ಬಿಸಿಯೂಟ ಪಡೆಯುವ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಆಹಾರಧಾನ್ಯಗಳನ್ನು ಸಾದಿಲ್ವಾರುಗಳನ್ನು ಬಳಸಬೇಕು.

★ಆಹಾರ ಧಾನ್ಯಗಳನ್ನು ಲಾರಿಗಳಿಂದ ಪಡೆಯುವಾಗ ತೂಕ ಸರಿ ಇದ್ದ ಬಗ್ಗೆ ಖಚಿತಪಡಿಸಿಕೊಳ್ಳಬೇಕು.

★ಖಾಲಿ ಚೀಲಗಳ ಬಗ್ಗೆ ಲೆಕ್ಕ-ಪತ್ರ ಇಟ್ಟು ನಿಯಮಾನಯಸಾರ ಕ್ರಮ ಕೈಗೊಳ್ಳಬೇಕು. ಖಾಲಿ ಚೀಲ ಮಾರಾಟದ ಹಣವನ್ನು ಕಡ್ಡಾಯವಾಗಿ ಅಕ್ಷರದಾಸೋಹ ಖಾತೆಗೆ ಜಮಾ ಮಾಡಬೇಕು.

★ಮುಖ್ಯಶಿಕ್ಷಕರು ಕಡ್ಡಾಯವಾಗಿ ಅಡುಗೆ ಸಿಬ್ಬಂದಿಗಳ ವೇತನವನ್ನು ಚೆಕ್ ಮೂಲಕ ಪಾವತಿಸತಕ್ಕದ್ದು.

*************************************************

★ಬಿಸಿಯೂಟಕ್ಕೆ ಸಂಬಂದಿಸಿದ ಪ್ರಮುಖ ದಾಖಲೆಗಳು
*************************************************

1★ದೈನಂದಿನ ಹಾಜರಾತಿ ಮತ್ತು ಫಲಾನುಭವಿಗಳ ಮಾಹಿತಿ
2★ಅಕ್ಕಿ/ಗೋಧಿ/ಬೇಳೆ/ಎಣ್ಣೆ/ಸಾಂಬಾರ ಪದಾರ್ಥಗಳ ದಾಸ್ತಾನು ವಹಿ
3★ಸಾದಿಲ್ವಾರು ಪುಸ್ತಕ-ಕ್ಯಾಶ್ ಬುಕ್
4★ಅಡುಗೆ ಸಿಬ್ಬಂದಿಯ ದೈನಂದಿನ ಹಾಜರಾತಿ ಮತ್ತು ವೇತನ ಬಟವಾಡೆ ವಹಿ
5★ದಿನನಿತ್ಯ ತರಕಾರಿ ಖರ್ಚಿನ ವಿವರ
6★ಆಹಾರ ದಾನ್ಯಗಳ ಸರಬರಾಜಿನ ರಶಿದೀಗಳ ವಹಿ
7★ಆಹಾರ ಸರಬರಾಜು ವಹಿ
8★ಬೇಡಿಕೆ ಮತ್ತು ಉಪಯೋಗತಾ ಪ್ರಮಾಣ ಪತ್ರಗಳ ಕ್ರೋಢೀಕರಣ ವಹಿ
9★ಪ್ರತಿನಿತ್ಯ ಇಬ್ಬರು ಶಿಕ್ಷಕರು ಊಟಮಾಡಿದ ವಹಿ
10★ಶಿಲಿಂಡರ್ ಸ್ವೀಕರಿಸಿದ ಹಾಗೂ ಬಳಸಿದ ವಹಿ
11★ಮಾತ್ರೆಗಳನ್ನು ನೀಡಿದ ದಾಖಲೆ
12★ತಾಯಂದಿರ ಸಮೀತಿ ರಚಿಸಿದ ವಹಿ/ಹಾಗೂ ಪ್ರತಿ ದಿನ 4 ತಾಯಂದಿರು ಅಕ್ಷರದಾಸೋಹದಲ್ಲಿ ಭಾಗವಹಿಸಬೇಕು.
13★ಪಾತ್ರೆಗಳ ದಾಸ್ತಾನು ವಹಿ
14★ಖಾಲಿ ಚೀಲಗಳ ಲೆಕ್ಕಪತ್ರಗಳನ್ನಿಡಬೇಕು.
15★ಪ್ರತಿ ತಿಂಗಳು ಅಡುಗೆಯವರ ವೇತನ ಬಿಡಿಸಿಕೊಟ್ಟ ಬಗ್ಗೆ ಒಂದು ರಿಜಿಸ್ಟರ್ ನಲ್ಲಿ ಅವರವರ ಸಹಿ ತೆಗೆದುಕೊಂಡ ವಹಿ
16★ವೈಧ್ಯಕೀಯ ತಪಾಸನಾ ಪ್ರತಿ ಇಡುವುದು
17★ಅಗ್ನಿ ನಂದಕ ಅಳವಡಿಸಬೇಕು.
18★ಪ್ರಥಮ ಚಿಕಿತ್ಸೆ ಪೆಟ್ಟಿಗೆಯನ್ನೀಡುವುದು.
19★ತುರ್ತು ವೈಧ್ಯಕೀಯ ಯೋಜನೆ ತಯಾರಿಸಬೇಕು.
20★ ಮಧ್ಯಾಹ್ನ ಬಿಸಿಯೂಟ ಯೋಜನೆಯ ಲಾಂಚನ ಬರೆಸುವುದು.
21★ಪ್ರತಿ ವರ್ಷದ ಕೊನೆಗೆ ಅಕ್ಷರದಾಸೋಹ ದಾಖಲೆಗಳನ್ನು ಓಚರ್ ಸಹಿತ ಕಾಟನ್ ಬಟ್ಟೆಯಲ್ಲಿ ಬಂಡಲ್ ಮಾಡಿ ಇಡಬೇಕು.
22★ಅಕ್ಷರ ದಾಸೋಹದ ಸಾಮಾನ್ಯ ಮಾಹಿತಿಯನ್ನು ಅಡುಗೆ ಕೋಣೆಯ ಹೊರಗೋಡೆಯ ಮೇಲೆ ದಪ್ಪ ಅಕ್ಷರಗಳಲ್ಲಿ ಬರೆಸುವುದು.
*************************************************

ಶಾಲಾ ಹಂತದಲ್ಲಿ ನಿರ್ವಹಿಸುವ ಸಾಮಾನ್ಯ ದಾಖಲೆಗಳು

1 ರಿಂದ 5 ನೇ ತರಗತಿಯವರೆಗೆ
***************************
★ಅಕ್ಕಿ/ಗೋಧಿ-100 ಗ್ರಾಂ
★ತೊಗರಿ ಬೇಳೆ 20 ಗ್ರಾಂ
★ತಾಳೆ ಎಣ್ಣೆ-05 ಗ್ರಾಂ
★ಉಪ್ಪು-02 ಗ್ರಾಂ
★ತರಕಾರಿ-50 ಗ್ರಾಂ
★ತರಕಾರಿ-1 ರೂ
★ಹಾಲಿನ ಪುಡಿ-18 ಗ್ರಾಂ-150 ಮಿ.ಲೀ.ಹಾಲು
★ಸಕ್ಕರೆ 10 ಗ್ರಾಂ
★ಕ್ಷೀರ—50 ಪೈಸೆ(ಸಕ್ಕರೆ-ಗೊಡಂಬಿ)
★ಬೇಯಿಸಿದ ಆಹಾರ-450 ಗ್ರಾಂ
★ವರ್ಷಕ್ಕೆರಡು ಮಾತ್ರೆ-400mg-Allbendojole
★ವಾರಕ್ಕೆ 3 ಮಾತ್ರೆ-20mg-36 ವಾರ ನೀಡಬೇಕು.
(Iren and polic acid)
***************************

6 ರಿಂದ 10 ನೇ ತರಗತಿಯವರೆಗೆ
*****************************

★ಅಕ್ಕಿ/ಗೋಧಿ—150 ಗ್ರಾಂ
★ತೊಗರಿ ಬೇಳೆ—30 ಗ್ರಾಂ
★ತಾಳೆ ಎಣ್ಣೆ—7.5 ಗ್ರಾಂ
★ಉಪ್ಪು—4 ಗ್ರಾಂ
★ತರಕಾರಿ—75 ಗ್ರಾಂ
★ತರಕಾರಿ—
★ಬೇಯಿಸಿದ ಆಹಾರ—650 ಗ್ರಾಂ
★ವರ್ಷಕ್ಕೆರಡು ಮಾತ್ರೆ—2 Vitamin A(20mg)
★ವರ್ಷಕ್ಕೆರೆಉ ಮಾತ್ರೆ-2-Allbendojole
★ವಾರಕ್ಕೆ 1 ಮಾತ್ರೆ—Iren and polic acide
**************************************

★ಶಾಲಾ ಮಕ್ಕಳಿಗೆ ವೈಧ್ಯಕೀಯ ತಪಾಸನೆ ಮಾಡಿಸಬೇಕು.
★ಮುಖ್ಯ ಅಡುಗೆಯವರ ಸಂಬಳ—1600+100=1700
★ಸಹಾಯಕ ಅಡುಗೆಯವರಿಗೆ—1500+100=1600
★ಸೋಮವಾರ-ಗುರುವಾರ—ಅನ್ನಸಾಂಬಾರು
★ಶುಕ್ರವಾರ-ಚಿತ್ರನ್ನ/ಶನಿವಾರ-ಉಪ್ಪಿಟ್ಟು
★ಹಾಲು-ಸೋಮ-ಬುಧ-ಶನಿ-3 days in 1 week
★ಅಡುಗೆ ಸಿಬ್ಬಂದಿ ಎಪ್ರಾನ ಧರಿಸುವುದು ಕಡ್ಡಾಯ.
★ಅಡುಗೆಯವರು ಆರೋಗ್ಯವಂತರಾಗಿರುವ ಬಗ್ಗೆ ಪ್ರತಿ 3 ತಿಂಗಳಿಗೊಮ್ಮೆ ವೈಧ್ಯಕೀಯ ಪ್ರಮಾಣಪತ್ರ ಪಡೆಯುವುದು.
★ಮುಖ್ಯ ಅಡಯಗೆಯವರು ಬರೆದ ಲೆಕ್ಕಪತ್ರಗಳನ್ನು ಪರಿಶಿಲಿಸಿ ಮು.ಗು.ಸಹಿ ಮಾಡುವುದು.
★ಮುಖ್ಯಗುರುಗಳು ಅಕ್ಷರದಾಸೋಹಕ್ಕೆ ಹಾಗೂ ಕ್ಷೀರಭಾಗ್ಯಯೋಜನೆಗೆ ಮಾರ್ಗದರ್ಶಕರಾಗಿರುತ್ತಾರೆ.
★ಅಗ್ ಮಾರ್ಕ ಬಗ್ಗೆ ಗಮನವಿರಬೇಕು.
★ಖಾಲಿ ಗೋಣಿ ಚೀಲಗಳನ್ನು ಹರಾಜು ಮಾಡಿ ಆ ದುಡ್ಡನ್ನು ಅಕ್ಷರದಾಸೋಹ ಖಾತೆಗೆ ಜಮಾ ಮಾಡಿ ಮಕ್ಕಳಿಗೆ ಬೇಕಾದ ಸಾಮಾನುಗಳನ್ನು ಖರೀದಿಸಬೇಕು.
★ಆಹಾರ ದಾಸ್ತಾನು ತೂಕ ಮಾಡಿದ ನಂತರ ಆಹಾರ ತಯಾರಿಸಬೇಕು.
★ತರಕಾರಿಯನ್ನು ಕೊಂಡು ತರುವುದು ಮುಖ್ಯ ಅಡುಗೆಯವರ ಕರ್ತವ್ಯವಾಗಿರುತ್ತದೆ.
★ತರಕಾರಿ ತಂದಿರುವ ಬಗ್ಗೆ ಮುಖ್ಯ ಶಿಕ್ಷಕರು ಖಾತ್ರಿ ಪಡಿಸಿಕೊಳ್ಳಬೇಕು.
*************************************************

ಅಡುಗೆ ಸಿಬ್ಬಂದಿ ದಿನಚರಿ

★9:30 ಕ್ಕೆ ಶಾಲೆಗೆ ಹಾಜರಾಗುವುದು.
★10:30 ಕ್ಕೆ ಪಾತ್ರೆ ಪರಿಕರಗಳ ಸ್ವಚ್ಚತೆ ಮಾಡುವುದು.

★ಬೆಳಿಗ್ಗೆ 10:30 ರಿಂದ 11:00—ಮುಖ್ಯ ಅಡುಗೆಯವರು ತರಗತಿವಾರು ಹಾಜರಾತಿ ಮತ್ತು ಬಿಸಿಯೂಟ ಮಾಡುವ ಮಕ್ಕಳ ಸಂಖ್ಯೆಯನ್ನು ನಮೂದಿಸಿ ತರಗತಿ ಶಿಕ್ಷಕರಿಂದ ಸಹಿ ತೆಗೆದುಕೊಳ್ಳುವುದು.
★11:00 ರಿಂದ 11:15 —ಬಿಸಿಯೂಟ ಮಾಡುವ ಮಕ್ಕಳ ಸಂಖ್ಯೆಗನುಗುಣವಾಗಿ ಆಹಾರ ಧಾನ್ಯಗಳನ್ನು ಅಳತೆಮಾಡಿ ತೆಗೆದುಕೊಳ್ಳುವುದು.
★11:15 ರಿಂದ 1:15—ಅಡುಗೆ ತಯಾರಿಸುವುದು.ಪ್ರತಿ ದಿನದ ಖರ್ಚು ವೆಚ್ಚಗಳನ್ನು ಬರೆಯುವುದು.
★1:15 ರಿಂದ 1:55—ಮಕ್ಕಳನ್ನು ಸಾಲಾಗಿ ಕೂರಿಸಿ ಊಟ ಬಡಿಸುವುದು.
★1:55-ಅನಿಲ ಸ್ವಿಚ್ಚ್ ಆಫ್ ಮಾಡಿ,ಪಾತ್ರೆ ಪರಿಕರಗಳನ್ನು ತೊಳೆಯುವುದು.
*************************************************

ಮುಖ್ಯ ಹಾಗೂ ಸಹಾಯಕ ಅಡುಗೆಯವರ ಕರ್ತವ್ಯಗಳು.

★ಅಡುಗೆ ಕೇಂದ್ರದ ಉತ್ತಮ ನಿರ್ವಹಣೆಯು /ಸ್ವಚ್ಚತೆ ಮುಖ್ಯ ಅಡುಗೆಯವರ ಜವಾಬ್ದಾರಿಯಾಗಿರುತ್ತದೆ.
★ಶಾಲಾ ಸಮಯಕ್ಕೆ ಸರಿಯಾಗಿ ಶಾಲೆಗೆ ಹಾಜರಾಗಬೇಕು.
★ಸಿಲಿಂಡರ್ ದುರಸ್ತಿ ಬಗ್ಗೆ ಮುಖ್ಯಗುರುಗಳ ಜವಾಬ್ದಾರಿ
★sdmc ಸಮ್ಮುಖದಲ್ಲಿ ಆಹಾರ ಪದಾರ್ಥ ಪಡೆದು,ಗುಣಮಟ್ಟ ಪರಿಕ್ಷಿಸಿ,ಅಡುಗೆ ತಯಾರಿಸುವದು.
★೧೫/ಒಂದು ತಿಂಗಳಿಗೆ ಸಾಕಾಗುವಷ್ಟು ಸಾಂಬಾರು ಪದಾರ್ಥ ಖರೀದಿ ಮಾಡಿ ವೋಚರ ಇಡುವುದು.
★ಹಾಲಿನ ಪುಡಿ ದಾಸ್ತಾನು ಸುರಕ್ಷಿತವಾಗಿಡಬೇಕು.
★ಶುಚಿಯಾದ ಹಾಲನ್ನು ತಯಾರಿಸಿ ಬಡಿಸುವುದು.
★ದಿನಾಲು/ವಾರಕ್ಕೊಂದು ಸಾರಿ ತರಕಾರಿ ಖರೀದಿಸಿ ವೋಚರ್ ಗಳನ್ನಿಡುವುದು.
★ಅನಿಲ ವಿತರಕರಿಂದ ಗ್ಯಾಸ ಪಡೆಯುವುದು.ತೂಕ 14.2kg ಇರುವುದನ್ನು ಖಾತ್ರಿ ಪಡಿಸಿಕೊಳ್ಳುವುದು.ಸಿಲಿಂಡರಿ
ನ ತಳಭಾಗದಲ್ಲುರುವ ನಂ.ಅನ್ನು ದಾಸ್ತಾನು ಪುಸ್ತಕದಲ್ಲಿ ನಮೂದಿಸುವುದು.
★ಸಾಂಬಾರು ಪದಾರ್ಥಗಳನ್ನು ಒಂದು ವಾರಕ್ಕೆ ಸಾಕಾಗುವಷ್ಟು “ಸಾಂಬಾರು ಪುಡಿ” ತಯಾರಿಸಿಕೊಳ್ಳುವುದು.
★ಹಾಜರಾತಿ ಮತ್ತು ಫಲಾನುಭವಿಗಳ ಸಂಖ್ಯೆ ಪಡೆದು ಮುಖ್ಯಗುರುಗಳಿಂದ ದೃಢೀರಿಸಿಕೊಳ್ಳಬೇಕು.
★ಕುಡಿಯುವ ನೀರು ಶುದ್ದವಾಗಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳುವುದು.
★ಆಹಾರ ತಯಾರಿಸಿದ ನಂತರ ಅದರ ಗುಣಮಟ್ಟವನ್ನು ಪರೀಕ್ಷೆ ಮಾಡುವುದು.
★ಅಡುಗೆ ಅನಿಲವನ್ನು ಸುರಕ್ಷಿತವಾಗಿ/ ಮಿತವಾಗಿ ಬಳಕೆ
★ಅಡುಗೆ ಮನೆಯೊಳಗೆ ಅಪರಿಚಿತರು ಬರದಂತೆ ಮುಂಜಾಗ್ರತೆವಹಿಸಬೇಕು.
★ಪ್ರತಿ ತಿಂಗಳು ಬಳಕೆ ಮ/ಉಳಿಕೆ/ಬೇಡಿಕೆ ಪಟ್ಟಿಯನ್ನು ತಯಾರಿಸಿ ಅಧ್ಯಕ್ಷರು,ಮುಖ್ಯ ಶಿಕ್ಷಕರಿಂದ ದೃಢೀಕರಣ ಮಾಡಿಕೊಂಡು crp ಮೂಲಕ ಅಕ್ಷರದಾಸೋಹ ಅಧಿಕಾರಿಗಳಿಗೆ ಮುಟ್ಟಿಸುವುದು.
★ಮೇಲಾಧಿಕಾರಿಗಳು ತಪಾಸಣೆಗೆ ಬಂದಾಗ ಅಗತ್ಯ ಮಾಹಿತಿಗಳನ್ನು ಒಪ್ಪಿಸುವುದು.
★ಮುಖ್ಯ ಅಡುಗೆಯವರು ರಜೆ ಹೋಗುವ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯರ ಅನುಮತಿ ಪಡೆಯುವುದು.

ಮುಖ್ಯ ಶಿಕ್ಷಕರ ಜವಾಬ್ದಾರಿಗಳು

★ಆಹಾರ ಧಾನ್ಯಗಳ ಬಳಕೆ ಪ್ರಮಾಣ ಪತ್ರ/ಬೇಡಿಕೆ ಪ್ರಮಾಣ ಪತ್ರ ಅಕ್ಷರದಾಸೋಹ ಅಧಿಕಾರಿಗಳಿಗೆ ಸಲ್ಲಿಕೆ
★ಆಹಾರ ಧಾನ್ಯಗಳನ್ನು ವಿಲೇವಾರಿ ಮಾಡುವಾಗ ತೂಕ/ಗುಣಮಟ್ಟವನ್ನು ಪರಿಶಿಲುಸಬೇಕು.
★ಅಡುಗೆ ಗೆ ಸಂಬಂದಿಸಿದಂತೆ ಎಲ್ಲ ವಿಷಯಗಳಲ್ಲಿಯೂ ಮುಖ್ಯ ಅಡುಗೆಯವರು ಗಮನ ಹರಿಸುತ್ತಿರಬೇಕು.
★ತಾಯಂದಿರ ಸಮೀತಿ ರಚಿಸಬೇಕು.
★ಪ್ರತಿ ದಿನ ರುಚಿ ನೋಡಲು ಶಿಕ್ಷಕರನ್ನು ನೇಮಿಸಿ ವಹಿಯಲ್ಲಿ ದಾಖಲಿಸುವುದು.
★ಮಕ್ಕಳನ್ನು ಬಿಸಿಯೂಟ ಕೆಲಸ ಕಾರ್ಯಗಳಿಗೆ ಬಳಸಿಕೊಳ್ಳದಂತೆ ನೋಡಿಕೊಳ್ಳಬೇಕು.
★ಶಾಲಾ ಶಿಕ್ಷಕರ ಮೇಲುಸ್ತುವಾರಿಯಲ್ಲಿ ಸುರಕ್ಷಿತವಾಗಿ ಅಡುಗೆ ಬಡಿಸುವುದನ್ನು ವ್ಯವಸ್ಥೆ ಮಾಡಿಕೊಳ್ಳುವುದು.
★ಅಪರಿಚಿತರು ಪ್ರವೇಶಿಸದಂತೆ ನೋಡಿಕೊಳ್ಳುವುದು.
★ಅನಾಹುತ ಅಸಕಸ್ಮಿಕ ಘಟನೆಗಳು ನಡೆಯದಂತೆ ನೋಡಿಕೊಳ್ಳುವುದು.
★ಅಗ್ನಿ ನಂದಕವನ್ನು ಅಡುಗೆ ಕೋಣೆಯಲ್ಲಿ ಅಳವಡಿಸಬೇಕು.ಸಮಯಕ್ಕೆ ಸರಿಯಾಗಿ ರೀಫಿಲ್ಲಿಂಗ ಮಾಡಿಸಿ ಚಾಲನೆಯಲ್ಲಿಟ್ಟಿರಬೇಕು.
★ಸುವರ್ಣ ಆರೋಗ್ಯ ಚೈತನ್ಯ ಕಾರ್ಯಕ್ರಮದಡಿ ಮಕ್ಕಳ ಆರೋಗ್ಯ ತಪಾಸಣೆ ಮಾಡಿಸಿ health card ನಿರ್ವಹಿಸುವುದು.
★ದಾಖಲೆಗಳನ್ನು ನಿರ್ವಹಿಸುವುದು,ಪರಿಶಿಲಿಸುವುದು.
★ಒಟ್ಟಾರೆ ಅಕ್ಷರದಾಸೋಹ ಯಶಸ್ವಿಗೊಳಿಸಲು ಮುಖ್ಯಗುರುಗಳು ಸಹ ಕೈ

U - dice + Log in


Unified District Information System for Education

👇👇👇👇👇👇👇👇

👉REPORT MODULE UPDATE 20E 


👉STUDENT MODULE UPDATE


👉TEACHERS MODULE UPDATE


👉SCHOOL PROFILE UPDATE


👉U - DICE+ LOGIN ( click here) ಯು - ಡೈಸ್ ಪ್ಲಸ್ ಗೆ ಲಾಗಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ NEW

Questions 👇👇

Q.no 1: How to Get PEN number of  students in udice +

Ans : Click here 👈


Q.NO 2 : HOW TO SEARCH  PEN NUMBER

ANS : CLICK HERE 👈


Q.NO 3 : HOW TO COMPLETE PROGRESSION MODULE ?

ANS : CLICK HERE 👈


Q.NO.4 : HOW TO VIEW SUMMARY ?

ANS : CLICK HERE 👈


Q.NO.5 ; HOW TO FINALIZE PROGRESSION ?

ANS : CLICK HERE 👈


Q.NO.6 : HOW TO IMPORT STUDENTS ?

ANS : CLICK HERE 👈


Q.NO.7 : HOW TO ISSUE TRANSFER CERTIFICATE IN U-DICE+ ?

ANS : CLICK HERE 👈


Q.NO.8 : HOW TO CHANGE AADHAR NUMBER IN SDMC/U-DICE+ ?

ANS : CLICK HERE 👈


Q.NO.9 : HOW TO ADD FIRST STANDERD STUDENTS IN THE YEAR 2023-24 ?

ANS : CLICK HERE


Q.NO.10 : HOW TO COMPLETE GP/EP IN U-DICE+ ?

ANS : CLICK HERE





22.7.16

*ಶಿಕ್ಷಕರ ನೇಮಕ, ವರ್ಗಾವಣೆ ಇನ್ನು ಜಿಲ್ಲಾ ಮಟ್ಟಕ್ಕೆ ಸೀಮಿತ*

*ಶಿಕ್ಷಕರ ನೇಮಕ, ವರ್ಗಾವಣೆ ಇನ್ನು ಜಿಲ್ಲಾ ಮಟ್ಟಕ್ಕೆ ಸೀಮಿತ*

ನೂತನ ತಿದ್ದುಪಡಿ ಪ್ರಸ್ತಾವನೆ ಮುಂದಿನ ವರ್ಷ ಜಾರಿ

ನೇಮಕಗೊಂಡ ಜಿಲ್ಲೆಯಲ್ಲೇ ನಿವೃತ್ತಿ
ಅನ್ಯ ಜಿಲ್ಲೆಗಳಿಗೆ ವರ್ಗಾವಣೆ ಪಡೆಯುವುದು ಇನ್ನು ಅಸಾಧ್ಯ

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಬಹುನಿರೀಕ್ಷಿತ ವರ್ಗಾವಣೆ ಕಾಯ್ದೆ ತಿದ್ದುಪಡಿ ನೆಪದಲ್ಲಿ ರಾಜ್ಯ ಸರ್ಕಾರ ಶಿಕ್ಷಕ ಸಮುದಾಯವನ್ನು ಬೆಂಕಿಯಿಂದ ಬಾಣಲಿಗೆ ದೂಡಿತೇ ಎಂಬ ಅನುಮಾನ ಮೂಡಿದೆ.
ಹಲವು ನ್ಯೂನತೆಗಳಿದ್ದ 2007ರ ಶಿಕ್ಷಕರ ವರ್ಗಾವಣೆ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿರುವ ರಾಜ್ಯ ಸರ್ಕಾರ, ವರ್ಗಾವಣೆ ಮತ್ತು ನೇಮಕಾತಿ ಪ್ರಕ್ರಿಯೆಯನ್ನು ಜಿಲ್ಲಾ ಮಟ್ಟದಲ್ಲೇ ನಡೆಸಿ, ಶಿಕ್ಷಕರು ನೇಮಕಗೊಳ್ಳುವ ಜಿಲ್ಲೆಯಲ್ಲೇ ನಿವೃತ್ತಿ ಅಗಬೇಕೆಂಬ ನಿಯಮ ಜಾರಿಗೆ ತರಲು ಹೊರಟಿದೆ. ಆದರೆ, ಇದು ಅತಾರ್ಕಿಕ ಮತ್ತು ಅವೈಜ್ಞಾನಿಕ ಎಂಬುದು ಶಿಕ್ಷಕ ಸಮುದಾಯದ ಆಕ್ಷೇಪ.

ಸರ್ಕಾರದ ಈ ಪ್ರಸ್ತಾವಿತ ಹೊಸ
ತಿದ್ದುಪಡಿ 2017ನೇ ಸಾಲಿನಿಂದ ಜಾರಿಗೆ ಬರಬೇಕಿದೆ. ಹೊಸ ವರ್ಗಾವಣೆ ನೀತಿಯ ಅತಿದೊಡ್ಡ ಲೋಪವೆಂದರೆ ಶಿಕ್ಷಕರು ತಾವು ನೇಮಕವಾಗಿರುವ ಜಿಲ್ಲೆಯಿಂದ ಅದೆಂಥಾ ಗಂಭೀರ ಕಾರಣಗಳಿದ್ದರೂ ಅನ್ಯ ಜಿಲ್ಲೆಗಳಿಗೆ ವರ್ಗ ಪಡೆಯಲು ಸಾಧ್ಯವಾಗುವುದೇ ಇಲ್ಲ.
ಇದೊಂದು ರೀತಿ ಈಗಾಗಲೇ ನೊಂದಿರುವ ಶಿಕ್ಷಕರನ್ನು ಬೆಂಕಿಯಿಂದ ಬಾಣಲೆಗೆ ದೂಡುವ ಯೋಜನೆಯಂತೆ ಭಾಸವಾಗುತ್ತಿದೆ. ಒಟ್ಟಿನಲ್ಲಿ ಪರ ಊರಿಗೆ ವರ್ಗಾವಣೆ ಬಯಸುವುದಿರಲಿ, ಶಿಕ್ಷಕರಾಗುವುದೇ ತಪ್ಪು ಎಂಬ ಭಾವನೆ ಬಂದರೂ ಆಶ್ಚರ್ಯವಿಲ್ಲ. 2007ರಲ್ಲಿ ಜಾರಿಗೆ ತಂದಿದ್ದ ರಾಜ್ಯ ಸಿವಿಲ್ ಸೇವೆಗಳ (ಶಿಕ್ಷಕರ ವರ್ಗಾವಣೆ ನಿಯಂತ್ರಣ) ಅಧಿನಿಯಮದಲ್ಲೇ ಸಾಕಷ್ಟು ಗೊಂದಲಗಳಿದ್ದವು. ಇದನ್ನು ಶಿಕ್ಷಣ ಸಚಿವರೇ ಒಪ್ಪಿಕೊಂಡಿದ್ದರು. ಈ ಹಿಂದಿನ ಕಾಯ್ದೆ ಜಾರಿಗೆ ತಂದಾಗ ನಾನು ಇರಲಿಲ್ಲ. ಹಳೇ ಕಾಯ್ದೆಗೆ ತಿದ್ದುಪಡಿ ತಂದು ಶಿಕ್ಷಕರ ಹಿತ ಕಾಯುತ್ತೇನೆ ಎಂದು ಹಲವು ಬಾರಿ ಹೇಳಿದ್ದರು. ಆದರೆ, ಇದೀಗ ಜಿಲ್ಲೆಯನ್ನೇ ಘಟಕವನ್ನಾಗಿ ಪರಿವರ್ತಿಸುವ ಮೂಲಕ ಶಿಕ್ಷಕರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವಂತಾಗಲಿದೆ.
ಹೊಸ ನೀತಿಯಿಂದಾಗಿ ಶಿಕ್ಷಕ ದಂಪತಿ ಒಂದೇ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುವುದು ಸಾಧ್ಯವಾಗುವುದಿಲ್ಲ. ಉದಾಹರಣೆಗೆ ರಾಮನಗರದಲ್ಲಿ ರುವ ಶಿಕ್ಷಕನೊಬ್ಬ ಅದೇ ಜಿಲ್ಲೆಯಲ್ಲಿರುವ ಬೇರೆ ತಾಲೂಕುಗಳಿಗೆ ವರ್ಗಾವಣೆ ಪಡೆಯಬಹುದೇ ವಿನಹ ಬೇರೆ ಯಾವ ಜಿಲ್ಲೆಗೂ ಹೋಗಲು ಸಾಧ್ಯವಿಲ್ಲ. ಅಷ್ಟೇ ಅಲ್ಲ ಹುಬ್ಬಳ್ಳಿಯಲ್ಲಿ ಶಿಕ್ಷಕಿಯಾಗಿ ನೇಮಕಗೊಂಡ ಯುವತಿ ಅದೇ ಜಿಲ್ಲೆಯವರನ್ನು ಮದುವೆಯಾದರೆ ಬಚಾವ್. ಒಂದು ವೇಳೆ ಬೆಂಗಳೂರಿನ ಹುಡುಗನನ್ನು ಮದುವೆಯಾಗಬೇಕೆಂದರೆ ಕೆಲಸವನ್ನೇ ಬಿಡಬೇಕು ಇಲ್ಲವೇ, ಗಂಡನನ್ನೇ ಹುಬ್ಬಳ್ಳಿಗೆ ಕರೆಸಿಕೊಳ್ಳಬೇಕು. ಯಾಕೆಂದರೆ, ಆಕೆಗಂತೂ ವರ್ಗಾವಣೆ ಸಿಗುವುದಿಲ್ಲ. ಇಷ್ಟು ವರ್ಷ ಘಟಕದ ಒಳಗೆ ವರ್ಗ ಬಯಸಿದಲ್ಲಿ ಶೇ.5 ಮತ್ತು ಘಟಕದಿಂದ ಹೊರಗೆ ಶೇ.3 ಮೀಸಲಾತಿ ನೀಡಲಾಗುತ್ತಿತ್ತು. ಇದರಿಂದ ಕಳೆದ ವರ್ಷ 1357 ಪ್ರಾಥಮಿಕ ಮತ್ತು 404 ಪ್ರೌಢಶಾಲಾ ಶಿಕ್ಷಕರು ಘಟಕದ ಹೊರಗಿನ ವರ್ಗಾವಣೆಯ ಲಾಭ ಪಡೆದುಕೊಂಡಿದ್ದರು. ಸದ್ಯ ಜಾರಿಗೆ ತರಲು ಹೊರಟಿರುವ ಈ ಜಿಲ್ಲಾ ನಿವೃತ್ತಿ ಯೋಜನೆ 2017ರ ಸಾಲಿನಿಂದಲೇ ಅನ್ವಯವಾಗಲಿದ್ದು, ಪ್ರಸಕ್ತ ವರ್ಷ ಸದ್ಯ ಜಾರಿಯಲ್ಲಿರುವ ಕಾನೂನಿನಂತೆಯೇ ವರ್ಗಾವಣೆ ನಡೆಯಲಿದೆ.  ರಾಜ್ಯದ 13 ಜಿಲ್ಲೆ ಹೊರತುಪಡಿಸಿ 21 ಶೈಕ್ಷಣಿಕ ಜಿಲ್ಲೆಗಳಲ್ಲಿ ಶಿಕ್ಷಕರ ಕೊರತೆ ಇದೆ. ಹಾಗಾಗಿ ಈ ವರ್ಷ ಹೆಚ್ಚುವರಿಯಾಗಿರುವ ಶಿಕ್ಷಕರನ್ನು ಅವರಿಗೆ ಬೇಕಾದ ಕಡೆ ವರ್ಗಾವಣೆ ಮಾಡಲಾಗುವುದು. ಮುಂದಿನ ವರ್ಷದಿಂದ ಜಿಲ್ಲಾ ಮಟ್ಟದಲ್ಲಿ ಮಾತ್ರ ವರ್ಗಾವಣೆಗಳು ನಡೆಯಲಿವೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅನುತೀರ್ಣರಾದವರಿಗೆ ಪ್ರವೇಶ: ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಶಾಲೆ ಮತ್ತು ಕಾಲೇಜುಗಳಲ್ಲಿ ಪುನಃ ಪ್ರವೇಶ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಅವರು ತರಗತಿಗಳಿಂದ ಹೊರಗುಳಿದರೆ ಅನ್ಯ ಚಟುವಟಿಕೆಗಳಲ್ಲಿ ತೊಡಗುವ ಅಪಾಯ ಇರುವುದರಿಂದ ಪುನಃ ಶಾಲೆ-ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಅವಕಾಶ ನೀಡಲಾಗುವುದು. ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಹಾಜರಾತಿಯನ್ನು ಕಡ್ಡಾಯಗೊಳಿಸಲಾಗಿದೆ. ಕನ್ನಡ ಮತ್ತು ಇಂಗ್ಲೀಷ್ ಪರೀಕ್ಷೆಯಲ್ಲಿ ವಿನಾಯಿತಿ ನೀಡುವ ಬಗ್ಗೆಯೂ ಚಿಂತನೆ ಇದೆ ಎಂದರು.

*ಶಾಲೆ ಮುಚ್ಚಲ್ಲ*

ರಾಜ್ಯದಲ್ಲಿ 10ಕ್ಕಿಂತಲೂ ಕಡಿಮೆ ವಿದ್ಯಾರ್ಥಿಗಳು ಇರುವ 4164 ಸಾವಿರ ಶಾಲೆಗಳಿವೆ. ಆದರೆ ಆ ಶಾಲೆಗಳನ್ನು ನಾವು ಮುಚ್ಚುವುದಿಲ್ಲ. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರನ್ನು ನೇಮಿಸಲಾಗುವುದು. ಪ್ರಸಕ್ತ ವರ್ಷದಲ್ಲಿ 13 ಸಾವಿರ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುವುದು. ಅದರ ಪೈಕಿ 10 ಸಾವಿರ ಶಿಕ್ಷಕರ ನೇಮಕಕ್ಕೆ ಅನುಮೋದನೆ ಸಿಕ್ಕಿದೆ. ಉಳಿದ 3 ಸಾವಿರ ಶಿಕ್ಷಕರನ್ನು ಸರ್ಕಾರದ ಒಪ್ಪಿಗೆ ಪಡೆದು ನೇಮಿಸಿಕೊಳ್ಳಲಾಗುವುದು. ರಾಜ್ಯದಲ್ಲಿ ಒಟ್ಟು 22 ಸಾವಿರ ಶಿಕ್ಷಕರ ಕೊರತೆ ಇದೆ. ಕೆಎಸ್‌ಆರ್‌ಟಿಸಿ ಮಾದರಿಯಲ್ಲಿ ನಿವೃತ್ತರಾಗುವ ಹುದ್ದೆಗಳಿಗೆ ನೇಮಕಾತಿ ನಡೆಸುವ ಪ್ರಕ್ರಿಯೆಯನ್ನು ಜಾರಿಗೆ ತರಲಾಗುವುದು ಎಂದು ಸೇಠ್ ತಿಳಿಸಿದರು.

*ಸಮವಸ್ತ*

ಮುಂದಿನ ವರ್ಷದಿಂದ ಕೈಮಗ್ಗ ಅಭಿವೃದ್ಧಿ ನಿಗಮದಿಂದಲೇ ಸಮವಸಗಳನ್ನು ಖರೀದಿ ಮಾಡಲಾಗುವುದು. ರಾಜ್ಯದ 47 ಸಾವಿರ ಶಾಲೆಗಳ ಪೈಕಿ ಬೆಂಗಳೂರು, ಬೆಳಗಾವಿ ಮತ್ತು ಕಲಬುರಗಿ ಜಿಲ್ಲೆಗಳಲ್ಲಿನ ಎಲ್ಲಾ ಮಕ್ಕಳಿಗೆ ಸಮವಸ ವಿತರಿಸಲಾಗಿದೆ. ಮೈಸೂರು ವಿಭಾಗದಲ್ಲಿ ಮಾತ್ರ ಸ್ವಲ್ಪ ವಿಳಂಬವಾಗಿದೆ. ಈ ತಿಂಗಳಾಂತ್ಯಕ್ಕೆ ಅಲ್ಲಿಯೂ ಸಮವಸ ವಿತರಿಸಲಾಗುವುದು ಎಂದು ಅವರು ಹೇಳಿದರು.

*ಕ್ರಿಮಿನಲ್ ಮೊಕದ್ದಮೆ*

ಸ್ಥಳೀಯ ಮುಖಂಡರೊಬ್ಬರ ಒತ್ತಡಕ್ಕೆ ಮಣಿದು ಯಮಕನಮರಡಿ ಶಾಲೆಯಲ್ಲಿ ಪಾಠ ಮಾಡಲಾಗುತ್ತಿತ್ತು. ಆ ಶಾಲೆಯ ಗೋಡೆ ಕುಸಿದು ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಆ ರೀತಿ ಒತ್ತಡ ಹಾಕಿದ ಸ್ಥಳೀಯ ಮುಖಂಡ ಯಾರು ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ. ಅವರು ಯಾರೇ ಆಗಿದ್ದರೂ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ಸೇಠ್ ತಿಳಿಸಿದರು.

ನೀವೂ ಪ್ರತಿಕ್ರಿಯಿಸಿ
ನೇಮಕಗೊಂಡ ಜಿಲ್ಲೆಯಲ್ಲೇ ನಿವೃತ್ತಿಯಾ
ಗಬೇಕೆಂಬ ಸರ್ಕಾರದ ಪ್ರಸ್ತಾವಿತ ವರ್ಗಾವಣೆ ನೀತಿ ಎಷ್ಟು ಸರಿ. ಶಿಕ್ಷಕ ಸಮುದಾಯಕ್ಕೆ ಇದರಿಂದ ಅನುಕೂಲವಾಗಲಿದೆಯೇ? ಈ ಬಗ್ಗೆ ನಿಮ್ಮ ಅಭಿಪ್ರಾಯ ನಮಗೆ ಬರೆದು ಕಳಿಸಿ.

*ಅಲ್ಲೇ ನೇಮಕ, ಅಲ್ಲೇ ನಿವೃತ್ತಿ*

ಶಿಕ್ಷಕ ದಂಪತಿಗಳ ತೊಂದರೆ ತಪ್ಪಿಸಲು ಕಾಯ್ದೆಗೆ ತಿದ್ದುಪಡಿ ತರಲಾಗುತ್ತದೆ. ಹೊಸ ಕಾಯ್ದೆ ಪ್ರಕಾರ ಜಿಲ್ಲೆಯನ್ನು ಘಟಕ ವನ್ನಾಗಿಸಿ ನೇಮಕಾತಿ ಮತ್ತು ವರ್ಗಾವಣೆ ನಡೆಯಲಿದೆ. ಈ ಕಾಯ್ದೆ  ಜಾರಿಗೂ ಮುನ್ನ ಹಾಲಿ ಶಿಕ್ಷಕರಿಗಾಗಿ ಜಿಲ್ಲೆಯಿಂದ ಜಿಲ್ಲೆಗೆ ವರ್ಗಾವಣೆಗೆ ಒಂದು ಬಾರಿ ಅವಕಾಶ ಕಲ್ಪಿಸಲಾಗುವುದು. ಆ ನಂತರ ಅವಕಾಶ ಇರುವುದಿಲ್ಲ.
| ತನ್ವೀರ್ ಸೇಠ್ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ

ವರ್ಗಾವಣೆ ವಿಷಯ

➡ಮೇಷ್ಟ್ರಿಗೂ ಅರ್ಥವಾಗದ ಹಳೆ ವರ್ಗಾ

ಬೆಂಗಳೂರು: ಕಳೆದ ಒಂಬತ್ತು ವರ್ಷಗಳಿಂದ ಶಿಕ್ಷಕರಿಗೂ ಅರ್ಥವಾಗದೇ ಕಗ್ಗಂಟಾಗಿ ಪರಿಣಮಿಸಿದ್ದ 2007ರ ವರ್ಗಾವಣೆ ನೀತಿಗೆ ತಿದ್ದುಪಡಿ ತಂದು ಮತ್ತಷ್ಟು ಸರಳೀಕರಣಗೊಳಿಸಲು ಸರ್ಕಾರ ಮುಂದಾಗಿದೆ. ಇದರೊಂದಿಗೆ ಈ ವರ್ಷ ಸಾಮೂಹಿಕವಾಗಿ ಶಿಕ್ಷಕರ ವರ್ಗಾವರ್ಗಿ ನಡೆಯುವುದು ಅನುಮಾನ ಎಂದೇ ಹೇಳಲಾಗುತ್ತಿದೆ.
ಸದ್ಯ ಶಿಕ್ಷಕರ ವರ್ಗಾವಣೆಗೆ 2007ರ ನೀತಿಯಂತೆ ಕೌನ್ಸೆಲಿಂಗ್ ಮಾದರಿಯಲ್ಲಿ ಶಿಕ್ಷಕರ ವರ್ಗಾವಣೆ ಮಾಡಲಾಗುತ್ತಿದೆ. ಆದರೆ ಈ ವರ್ಗಾವಣೆ ನೀತಿ ತಮಗೇ ಅರ್ಥವಾಗುತ್ತಿಲ್ಲ. ಇದು ಅಷ್ಟು ಕಠಿಣ ಮಾತ್ರವಲ್ಲ, ಭಾರಿ ಗೊಂದಲಗಳಿಂದಲೂ ಕೂಡಿದೆ ಎಂದು ಸ್ವತಃ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್ ಅವರೇ ಹೇಳಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ನಡೆಸಿದ ಸುದ್ದಿಗೋಷ್ಠಿ ನಡೆಸಿದ ಅವರು, ಮುಂದಿನ ಶೈಕ್ಷಣಿಕ ವರ್ಷದಿಂದ ವರ್ಗಾವಣೆಗಾಗಿ ಯಾರೂ ಬೆಂಗಳೂರು ಬಳಿ ಸುಳಿಯದಂತೆ ಮಾಡಲಾಗುವುದು ಎಂದರು.
ಪಾರದರ್ಶಕ ಮತ್ತು ಸರಳ ನೀತಿ ಜಾರಿಗೆ ತರಲಾಗುವುದು ಎಂದು ಭರವಸೆ ನೀಡಿದರು.
ಆದರೆ ವರ್ಗಾವಣೆ ಕುರಿತಂತೆ ಗೊಂದಲ ಎದ್ದಿರುವುದು ಶಿಕ್ಷಣ ಸಚಿವ ಮತ್ತು ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ವಿಭಿನ್ನ ಹೇಳಿಕೆಗಳಿಂದಾಗಿ. ವರ್ಗಾವಣೆ ಕುರಿತಂತೆಯೇ ಮಾತನಾಡಿರುವ ಕಾರ್ಯದರ್ಶಿ ಅಜಯ್ ಸೇಠ್, ಹೆಚ್ಚುವರಿ ಶಿಕ್ಷಕರ ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಕೌನ್ಸೆಲಿಂಗ್ ಮೂಲಕ ಮರು ನಿಯೋಜನೆ ಕಾರ್ಯ ಪ್ರಗತಿಯಲ್ಲಿದೆ. ಇದಾದ ಬಳಿಕ ಮಾರ್ಗಸೂಚಿ ಹೊರಡಿಸಿ ಕೆಲವೊಂದು ಮಾರ್ಗಸೂಚಿ ಬದಲಾವಣೆ ಮಾಡಿ, ಕೋರಿಕೆ ಸಲ್ಲಿಸುವ ಶಿಕ್ಷಕರ ವರ್ಗಾವಣೆ ಮಾಡಲಾಗುವುದು ಎಂದಷ್ಟೇ ಹೇಳಿದ್ದಾರೆ. ಇದರೊಂದಿಗೆ ಶಿಕ್ಷಕರ ವರ್ಗಾವಣೆ ಇನ್ನೂ ಅಸ್ಪಷ್ಟ ಎನ್ನುವಂತಾಗಿದೆ.

ಹೊಸ ಮಾರ್ಗಸೂಚಿ ಏನು?
ಈಗ ಇರುವ ವರ್ಗಾವಣೆ ನೀತಿಯಲ್ಲಿ ತಾಲೂಕನ್ನು ಒಂದು ಘಟಕವಾಗಿ ಪರಿಗಣಿಸಲಾಗುತ್ತಿದೆ. ತಾಲೂಕಿನ ಒಳಗೇ ವರ್ಗಾವಣೆಗೆ ಅವಕಾಶವಿದ್ದು ತಾಲೂಕಿನಿಂದ ತಾಲೂಕಿಗೂ ವರ್ಗಾವಣೆಗೆ ಅವಕಾಶವಿಲ್ಲ. ಆದರೆ ನೂತನ ಮಾರ್ಗಸೂಚಿಯಂತೆ ತಾಲೂಕು ಬದಲಾಗಿ ಇಡೀ ಜಿಲ್ಲೆಯನ್ನೇ ಒಂದು ಘಟಕವಾಗಿ ಪರಿಗಣಿಸಲಾಗುವುದು. ಈ ಕುರಿತು ಶಿಕ್ಷಕರಿಂದ ಭಾರಿ ಬೇಡಿಕೆ ವ್ಯಕ್ತವಾಗಿತ್ತು. ಈ ಘಟಕ ಬದಲಾವಣೆ ಲಾಭವನ್ನು ಸಾವಿರಾರು ಶಿಕ್ಷಕರು ಪಡೆಯಬಹುದಾಗಿದೆ. ಮಾತ್ರವಲ್ಲ ಇನ್ನು ಮುಂದೆ ಜಿಲ್ಲೆಗಳ ನಡುವೆ ವರ್ಗಾವಣೆಗೂ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಮಾರ್ಗಸೂಚಿ ರಚಿಸಲಾಗುವುದು.

ಎಲ್ಲ ಶಾಲೆಗಳಲ್ಲೂ ಶಿಕ್ಷಕರಿರುವಂತೆ ನೋಡಿಕೊಳ್ಳುವುದು. ಕೊಠಡಿಗೊಬ್ಬ ಶಿಕ್ಷಕ, ವಿಷಯವಾರು ಶಿಕ್ಷಕರನ್ನು ನಿಯೋಜಿಸಲುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. ರಾಜ್ಯದಲ್ಲಿ ರುವ ಶಿಕ್ಷಕರ ಕೊರತೆ ತುಂಬಿಸಲು ಶಿಕ್ಷಕರ ನೇಮಕಾತಿ ಕೂಡಾ ನಡೆಸಲಾಗುತ್ತದೆ

ಪತಿ ಪತ್ನಿ ಪ್ರಕರಣ:
ರಾಜ್ಯದಲ್ಲಿ ಸಾಕಷ್ಟು ಪತಿ ಪತ್ನಿಯರು ಶಿಕ್ಷಕರಾಗಿದ್ದು ಇವರಲ್ಲಿ ಅನೇಕರು ಉತ್ತರ ದಕ್ಷಿಣ ಎಂಬಂತೆ ದೂರದ ಜಿಲ್ಲೆಗಳಲ್ಲಿ ಕೆಲಸ ಮಾಡುವಂತಾಗಿದೆ. 2007ರ ವರ್ಗಾವಣೆ ನೀತಿಯಂತೆ ಇವರ ವರ್ಗಾವಣೆ ಸುಲಭ ಸಾಧ್ಯವಿರಲಿಲ್ಲ. ತಾಲೂಕು ಘಟಕ ಮೊದಲಾದ ನಿಬಂಧನೆಗಳ ಜೊತೆಗೆ ಕೇವಲ ಶೇ.1ರಷ್ಟು ಮಾತ್ರ ವರ್ಗಾವಣೆ ಅವಕಾಶ ಇನ್ನು ಮುಂದೆ ರದ್ದಾಗಿ ಈ ಪ್ರಮಾಣ ಶೇ.3ಕ್ಕೇರಿಸಲು ಚಿಂತನೆ ನಡೆಸಲಾಗಿದೆ. ಆಗ ಈಗ ಇರುವ ಮೂರುಪಟ್ಟು ಶಿಕ್ಷಕರ ವರ್nಗಾವಣೆಗೆ ಅವಕಾಶವಾಗಲಿದೆ.

ರಾಜ್ಯದಲ್ಲಿ ಸುಮಾರು 25 ಸಾವಿರಕ್ಕೂ ಹೆಚ್ಚು ಶಿಕ್ಷಕರ ಪತಿ ಪತ್ನಿ ಪ್ರಕರಣಗಳಿವೆ ಎಂದು ಅಂದಾಜಿಸಲಾಗಿದೆ. ಇವರಲ್ಲಿ ಬಹುತೇಕರು ಹತ್ತಿರವೂ ಅಲ್ಲದ ಜಿಲ್ಲೆಗಳಲ್ಲಿ ಶಿಕ್ಷಕರಾಗಿದ್ದು ಸಮಸ್ಯೆ ಎದುರಿಸುವಂತಾಗಿದೆ. ಇನ್ನು ಮುಂದೆ ಸರಳ ವರ್ಗಾವಣೆ ನೀತಿಯಿಂದ ಪತಿ ಪತ್ನಿಯರ ಪ್ರಕರಣಗಳನ್ನು ಆದ್ಯತೆ ಮೇಲೆ ಪರಿಗಣಿಸಿ ವರ್ಗಾವಣೆ ಮಾಡಲಾಗುವುದು ಎಂದು ಸಚಿವ ಸೇಠ್ ಹೇಳಿದ್ದಾರೆ.

2007ರ ನೀತಿ ಏನು?
2007ರ ಕಾಯಿದೆಯಂತೆ ಗ್ರಾಮೀಣ ಭಾಗಗಳಲ್ಲಿ ಶಿಕ್ಷಕರ ಕೊರತೆ ತಡೆಯುವ ನಿಟ್ಟಿನಲ್ಲಿ ಕೆಲವೊಂದು ಬಿಗಿ ನಿಯಮಾವಳಿಗಳನ್ನು ರೂಪಿಸಲಾಗಿತ್ತು. ಮೊದಲ ನೇಮಕಾತಿಯಲ್ಲೇ ಗ್ರಾಮೀಣ ಸೇವೆ ಕಡಾಯ ಮೊದಲಾದ ನಿಯಮಗಳಿದ್ದವು. 2005ಕ್ಕೂ ಮುನ್ನ ನಗರಭಾಗಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ಶಿಕ್ಷಕರ ಮುಂದಿನ ವರ್ಗಾವಣೆ ಗ್ರಾಮಾಂತರ ಪ್ರದೇಶಕ್ಕೆ ಕಡ್ಡಾಯವಾಗಿತ್ತು. ನೇಮಕಾತಿ ಆದ ಐದು ವರ್ಷಗಳ ಕಾಲ ನೇಮಕಾತಿ ಆದ ಗ್ರಾಮೀಣ ಪ್ರದೇಶದಿಂದ ವರ್ಗಾವಣೆ ಆಗುವಂತಿರಲಿಲ್ಲ. ಪತಿ ಪತ್ನಿ ಪ್ರಕರಣದಲ್ಲಿ ಒಂದು ಬಾರಿ ಮಾತ್ರ ವರ್ಗಾವಣೆಗೆ ಅವಕಾಶವಿತ್ತು. ಪರಸ್ಪರ ವರ್ಗಾವಣೆಗೆ ಸೇವಾವಧಿಯಲ್ಲಿ ಒಂದೇ ಬಾರಿ ಅವಕಾಶವಿತ್ತು. ಸರ್ವಶಿಕ್ಷಣ ಅಭಿಯಾನದಡಿ ನೇಮಕಗೊಂಡ ವಿಷಯವಾರು ಶಿಕ್ಷಕರಿಗೆ ವಿಷಯವಾರು ಹುದ್ದೆಗಳ ಲಭ್ಯತೆ ಆಧಾರದಲ್ಲೇ ವರ್ಗಾವಣೆ ಆಗಬೇಕಿತ್ತು.

ರಾಜ್ಯದಲ್ಲಿನ ಶಿಕ್ಷಕರ ವರ್ಗಾವಣೆಗೆ 2007ರಲ್ಲಿ ಜಾರಿಗೆ ತಂದಿರುವ ಪದ್ಧತಿ ಸಾಕಷ್ಟು ಗೊಂದಲಗಳಿಂದ ಕೂಡಿದೆ. ತಾಲೂಕು ಘಟಕ, ಜಿಲ್ಲಾ ಘ.

ವರ್ಗಾವಣೆ ಹೊಸ ಮಾರ್ಗಸೂಚಿ ಏನು?

* ತಾಲೂಕು ಘಟಕದ ಬದಲು, ಜಿಲ್ಲೆಯನ್ನೇ ಘಟಕವಾಗಿ ಪರಿಗಣನೆ
* ಜಿಲ್ಲೆ- ಜಿಲ್ಲೆಗಳ ನಡುವೆಯೂ ವರ್ಗಾವಣೆ
* ಪತಿ- ಪತ್ನಿ ಪ್ರಕರಣಗಳಿಗೆ ಹೆಚ್ಚಿನ ಆದ್ಯತೆ
* ಶೇ.1ರ ಬದಲಾಗಿ ಒಟ್ಟು ಶೇ.3 ವರ್ಗಾವಣೆ
* ನಿಯೋಜನೆ- ಮರು ನಿಯೋಜನೆಯಿಂದ ಸಾಕಷ್ಟು ವರ್ಗಾವಣೆಗೆ ಅವಕಾಶ
* ವರ್ಗಾವಣೆ ಗೊಂದಲಗಳ ನಿವಾರಣೆ

20.7.16

ಯೂರಿನ್‌ನ ಬಣ್ಣದಿಂದ ತಿಳಿಯಿರಿ ನಿಮಗೆ ಯಾವ ರೋಗ ಇದೆ ಎಂದು

ಯೂರಿನ್‌ನ ಬಣ್ಣದಿಂದ ತಿಳಿಯಿರಿ ನಿಮಗೆ ಯಾವ ರೋಗ ಇದೆ ಎಂದು
Published 20-Jul-2016 00:15 IST 
   

ನಮ್ಮ ದೇಹದಲ್ಲಿ ಕಾಣಿಸಿಕೊಳ್ಳುವ ಹಲವಾರು ಸಮಸ್ಯೆಗಳನ್ನು ಯೂರಿನ್‌ನ ಬಣ್ಣದಿಂದ ಪತ್ತೆ ಹಚ್ಚಬಹುದು. ಸರಿಯಾದ ಸಮಯದಲ್ಲಿ ಅದನ್ನು ಪತ್ತೆ ಹಚ್ಚಿದರೆ ಹಲವಾರು ರೋಗಗಳಿಂದ ನೀವು ಬಚಾವಾಗುವಿರಿ. ಪ್ರಖ್ಯಾತ ವೈದ್ಯರೊಬ್ಬರು ಇಲ್ಲಿ ಯೂರಿನ್‌ನ 8 ಸಂಕೇತಗಳ ಬಗ್ಗೆ ತಿಳಿಸಿದ್ದಾರೆ. ಇದನ್ನು ಇಗ್ನೋರ್‌ ಮಾಡದೆ ಅದರ ಬಗ್ಗೆ ಗಮನ ಹರಿಸಿದರೆ ನೀವು ರೋಗದಿಂದ ಮುಕ್ತಿ ಹೊಂದಬಹುದು.

ಯೂರಿನ್‌ನ ಬಣ್ಣದಿಂದ ತಿಳಿಯಿರಿ ನಿಮಗೆ ಯಾವ ರೋಗ ಇದೆ ಎಂದು...

ಡಾರ್ಕ್‌ ಹಳದಿ ಬಣ್ಣ : ಮೂತ್ರದ ಬಣ್ಣ ಈ ರೀತಿಯಾಗಿದ್ದರೆ ಇದು ಲಿವರ್‌ ಪ್ರಾಬ್ಲಂ ಮತ್ತು ರಕ್ತ ಕಡಿಮೆ ಇರುವ ಸಂಕೇತವಾಗಿದೆ. ಹಲವಾರು ಬಾರಿ ನಾವು ಸೇವನೆ ಮಾಡುವ ಔಷಧಿಯ ಕಾರಣದಿಂದಲೂ ಮೂತ್ರದ ಬಣ್ಣ ಹಳದಿಯಾಗಿರುತ್ತದೆ.

ಡಾರ್ಕ್‌ ಕೆಂಪು : ಇದು ಮಲೇರಿಯಾ ಮತ್ತು ಕಿಡ್ನಿ ಹಾಳಾಗಿರುವ ಸಂಕೇತವಾಗಿದೆ.

ಹಾಲಿನಂತೆ ಬಿಳಿ ಬಣ್ಣ : ಮೂತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬ್ಯಾಕ್ಟೀರಿಯಾಗಳು ಸೇರಿಕೊಂಡಿರುವುದರಿಂದ ಮೂತ್ರದ ಬಣ್ಣ ಹಾಲಿನಂತೆ ಬಿಳಿಯಾಗುತ್ತದೆ. ಅಲ್ಲದೇ ಅಲರ್ಜಿ ಮತ್ತು ಕಿಡ್ನಿ ಸ್ಟೋನ್‌ ಆಗಿರುವುದರಿಂದಲೂ ಈ ಬಣ್ಣ ಬರುತ್ತದೆ.

ಕೆಂಪು ಬಣ್ಣ : ಇದು ಕಿಡ್ನಿ ಸ್ಟೋನ್‌ ಅಥವಾ ಟ್ಯೂಮರ್‌ನ ಸಂಕೇತ. ಔಷಧಿಯ ಅಡ್ಡ ಪರಿಣಾಮದಿಂದಲೂ ಹೀಗೆ ಆಗುತ್ತದೆ.

ನೀಲಿ ಬಣ್ಣ :  ಮೂತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬ್ಯಾಕ್ಟೀರಿಯಾಗಳು ಸೇರಿಕೊಂಡಿರುವುದರಿಂದ ಹೀಗೆ ಆಗುತ್ತದೆ. ಕೆಲವೊಮ್ಮೆ ನೀವು ಸೇವಿಸುವ ಆಹಾರದಲ್ಲಿ ಆರ್ಟಿಫಿಶಿಯಲ್‌ ಬಣ್ಣ ಸೇರಿಕೊಂಡಿದ್ದರೆ ಹೀಗೆ ಆಗುತ್ತದೆ.

ಕಂದು ಬಣ್ಣ : ಲಿವರ್‌ ಹಾಳಾದರೆ ಈ ಬಣ್ಣದ ಮೂತ್ರ ಬರುತ್ತದೆ.

ನೀರಿನಂತಹ ಬಣ್ಣ : ಡಯಾಬಿಟೀಸ್‌ ಅಥವಾ ಕಿಡ್ನಿಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ ಕಾಣಿಸಿಕೊಂಡರೆ ಈ ರೀತಿ ಬಣ್ಣಕ್ಕೆ ಮೂತ್ರ ಬದಲಾಗುತ್ತದೆ.

ಚಾಕಲೇಟ್‌ನಂತಹ ಬಣ್ಣ : ಕಿಡ್ನಿ ಸ್ಟೋನ್‌ ಆದರೆ ಅಥವಾ ಟ್ಯೂಮರ್‌ನಲ್ಲಿ ಸೇರಿಕೊಂಡ ರಕ್ತ ಮೂತ್ರದೊಂದಿಗೆ ಬಂದಾಗ ಈ ಬಣ್ಣದಲ್ಲಿ ಕಾಣಿಸಿಕೊಳ್ಳುತ್ತದೆ.

19.7.16

ವಿದ್ಯಾರ್ಥಿ ವೇತನ

*ಪ್ರಥಮ ಪಿಯುಸಿ ವಿದ್ಯಾರ್ಥಿನಿಯ(ಅಲ್ಪಸಂಖ್ಯಾತ)ರಿಂದ 2016-17 ನೇ ಸಾಲಿನ ಮೌಲಾನಾ ಆಝಾದ್ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ*

ಪ್ರಥಮ ಪಿಯುಸಿಯಲ್ಲಿ ಕಲಿಯುತ್ತಿರುವ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ(ಮುಸ್ಲಿಂ, ಕ್ರಿಶ್ಚಿಯನ್, ಜೈನ, ಬೌದ್ಧ, ಸಿಖ್, ಪಾರ್ಸಿ)  ವಿದ್ಯಾರ್ಥಿನಿಯರಿಗಾಗಿ ಮಾತ್ರ. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

*ಅರ್ಹತೆ: ಎಸೆಸೆಲ್ಸಿ/ಕಳೆದ ತತ್ಸಮಾನ ಪರೀಕ್ಷೆಯಲ್ಲಿ ಶೇ. 55 ಕ್ಕಿಂತ ಹೆಚ್ಚು ಅಂಕ ಪಡೆದಿರಬೇಕು.*

ಆದಾಯ ಮಿತಿ: 1 ಲಕ್ಷದೊಳಗೆ ಇರಬೇಕು.

ಬೇಕಾದ ದಾಖಲೆಗಳು:
*(ಇಂಗ್ಲಿಷ್ ಅಥವಾ ಹಿಂದಿಯಲ್ಲಿರಬೇಕು)*

1. ಆದಾಯ ಪ್ರಮಾಣ ಪತ್ರ(ತಹಶೀಲ್ದಾರರಿಂದ ಪಡೆದ ದಾಖಲೆ ಇಂಗ್ಲಿಷ್ ನಲ್ಲಿರಬೇಕು ಅಥವಾ 20 ರೂ. ಗಳ ಅಫಿಡವಿಟ್ ಸಲ್ಲಿಸಬಹುದು)
2. ಎಸೆಸೆಲ್ಸಿ ಮಾರ್ಕ್ ಕಾರ್ಡ್ (ಅಂಕಪಟ್ಟಿ)
3. ಸ್ಟಡಿ ಸರ್ಟಿಫಿಕೇಟ್
4. ಪಾಸ್ ಪೋರ್ಟ್ ಸೈಝ್ ಫೋಟೋ
5. ಆಧಾರ್ ಕಾರ್ಡ್

ಎಲ್ಲಾ ದಾಖಲೆಗಳನ್ನು ಕಾಲೇಜಿನ ಪ್ರಾಂಶುಪಾಲರ ಮೂಲಕ ಅಟೆಸ್ಟೆಡ್ ಮಾಡಿರಬೇಕು.

*ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಸೆಪ್ಟೆಂಬರ್ 30, 2016*

ವೆಬ್ ಸೈಟ್ ವಿಳಾಸ: *www.maef.nic.in*

ಶಾಲಾ ಉಪಯುಕ್ತ

SCHOOL - ಶಾಲಾ ಉಪಯುಕ್ತ
No Bag dayನಾವು ಮನುಜರುಗಣಿತ ಗಣಕ21 ದಿನಗಳ ಓದು
100 ದಿನಗಳ ಓದುFLN PROGRAMಕಲಿಕಾ ಹಬ್ಬಪ್ರೇರಣಾ ಕ್ಲಬ್
ಸಚೇತನ ಕಾರ್ಯಕ್ರಮವೀರಗಾಥಾ program20 ಅಂಶಗಳ ಕಾರ್ಯಕ್ರಮ ಜಯಂತಿಗಳು
ನಮೂನೆಗಳು ಗೋಡೆ ಬರಹಗಳುಶೈಕ್ಷಣಿಕ ಪ್ರವಾಸ  ಭಾಷಣಗಳು


ADMISSION ದಾಖಲಾತಿ SATS LOGINPOST SANCTION EDU DICE + LOGIN
10 ಅಂಶಗಳ ಕಾರ್ಯಕ್ರಮSDMC ಸಮಗ್ರPM - SHRIಅನುದಾನ ಬಳಕೆ
SAPSDPವಿದ್ಯಾಂಜಲಿ 2.0ಗ್ರಂಥಾಲಯ ಅನುದಾನ
TOFIEಪ್ರತಿಭಾ ಕಾರಂಜಿSSP ಶಾಲಾ ಲಾಗಿನ್FIND SCHOOL


ಶೈಕ್ಷಣಿಕ ಮಾರ್ಗದರ್ಶಿವಾರ್ಷಿಕ ಪಠ್ಯ ವಿಭಜನೆಅಂದಾಜು ಪತ್ರಿಕೆತರಗತಿವಾರು ವೇಳಾಪಟ್ಟಿ
ರಸಪ್ರಶ್ನೆ ಕಾರ್ಯಕ್ರಮ govt ಸಸ್ಯ ಶ್ಯಾಮಲಾವಿದ್ಯಾ ವಾಹಿನಿ
ಶಾಲಾ ಕ್ರೋಢಿಕೃತ ವೇಳಾಪಟ್ಟಿ
ಸರಕಾರಿ ರಜೆಗಳುಶಾಲಾ ವಿದ್ಯಾರ್ಥಿ ಸಂಘಗಳುಮುಖ್ಯ ಗುರುಗಳ ಕರ್ತವ್ಯಗಳುText Books 
ಉಚಿತ ವಿದ್ಯುತ್ಗ್ರೇಡ್ - GRADEಪ್ರಗತಿ ಪತ್ರಗಳುವೇಳಾಪಟ್ಟಿ

Gjhn



MDM - ಮದ್ಯಾಹ್ನ ಬಿಸಿಯೂಟ ಯೋಜನೆ