lesson plans

text books

ಪುಟಗಳು

ಮತ್ತೊಮ್ಮೆ ಭೇಟಿ ನೀಡಲು vktworld ಎಂದು search ಮಾಡಿ ~~~ vktworld

27.7.20

ವಿದ್ಯಾಗಮ ಯೋಜನೆಯ ಕಲಿಕಾ ಕಾರ್ಯಕ್ರಮ

: *ಮುಖ್ಯಗುರುಗಳು ಹಾಗೂ  ಸಹಶಿಕ್ಷಕರುಗಳೆ ಕಾರ್ಯಪ್ರವೃತ್ತರಾಗಿ

*ವಿದ್ಯಾಗಮ ಯೋಜನೆಯ ಕಲಿಕಾ-ಕಾರ್ಯಕ್ರಮದ  ಮುಖ್ಯಾಂಶಗಳು*

💐💐💐💐💐

            ** ವಿದ್ಯಾಗಮ ಯೋಜನೆಯ ನಮೂನೆಗಳು 👈👈
            ** ವಿದ್ಯಾಗಮ ಯೋಜನೆಯ ಪರಿಚಯ 👈👈
     


*ಸರ್ಕಾರದ ಮಹತ್ವಾಕಾಂಕ್ಷಿ ವಿದ್ಯಾಗಮ ಎಂಬ ನಿರಂತರ ಕಲಿಕಾ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವುದು*.

*ಇದರ ಉದ್ದೇಶ covid-19 ಹಿನ್ನೆಲೆಯಲ್ಲಿ ಶಾಲೆಗಳನ್ನು ಪ್ರಾರಂಭಿಸುವವರಿಗೂ ಮಕ್ಕಳನ್ನು ಶಾಲೆಯೊಂದಿಗೆ ನಿರಂತರ ಸಂಪರ್ಕದಲ್ಲಿಟ್ಟುಕೊಳ್ಳುವದಾಗಿದೆ*
*ಈಗಾಗಲೇ ಪ್ರತಿಶಾಲೆಯಿಂದ ಮಾರ್ಗದರ್ಶಿ ಶಿಕ್ಷಕರುಗಳ ಪಟ್ಟಿಯನ್ನು ಪಡೆದುಕೊಳ್ಳಲಾಗಿದೆ.*

*ತಮ್ಮ ಶಾಲೆಗಳಲ್ಲಿರುವ ಮಕ್ಕಳನ್ನು ಅವರ ವಾಸಸ್ಥಳಕ್ಕನುಗುಣವಾಗಿ( habitations) 3 ಭಾಗಗಳಾಗಿಸಬೇಕು*.

1 ) 1ರಿಂದ 5ನೆ ತರಗತಿ
2 ) 6ರಿಂದ 8ನೆ ತರಗತಿ
3 ) 8ರಿಂದ 10 ನೆ ತರಗತಿ

*ಎಂಬ ಕಾಲ್ಪನಿಕ ಕೊಠಡಿಗಳಾಗಿ
ಮಾಡಿಕೊಂಡು 20ರಿಂದ25 ಮಕ್ಕಳಿಗೊಬ್ಬ ಮಾರ್ಗದರ್ಶಿ ಶಿಕ್ಷಕರನ್ನು ನೇಮಕ ಮಾಡಬೇಕು*

*ಆಯಾಯ ಗುಂಪುಗಳಿಗೆ ನಿಗದಿಪಡಿಸಿದ ಮಾರ್ಗದರ್ಶಿ ಶಿಕ್ಷಕರಿಂದ ಇಲಾಖೆ ಒದಗಿಸುವ  ಪಠ್ಯಪುಸ್ತಕಗಳನ್ನು ಕಲಿಕಾ-ಸಾಮಗ್ರಿಗಳನ್ನಾಗಿಸಿಕೊಂಡು ಮಕ್ಕಳಿಗೆ ವಿವರವಾದ ಮಾರ್ಗದರ್ಶನ ನೀಡುವುದು*

 *ಈಗಾಗಲೇ ಸರ್ಕಾರ 25ರಿಂದ 30% ರಷ್ಟು ಪಠ್ಯವನ್ನು ಕಡಿತಗೊಳಿಸಿರುವುದನ್ನು ಹೊರತುಪಡಿಸಿ ಉಳಿದ ಪಠ್ಯವಸ್ತುವನ್ನು ನಮ್ಮ ವಾರ್ಷಿಕ ಕಾರ್ಯಯೋಜನೆಯಂತೆ ಅನುಷ್ಠಾನಗೊಳಿಸಬೇಕು*

*ಮಕ್ಕಳು & ಶಿಕ್ಷಕರುಗಳ ಸಂಪರ್ಕ 3 ಕೊಠಡಿಗಳಲ್ಲಿ ವಿಂಗಡಣೆಯಾಗಿರುತ್ತದೆ*

1 )ಇಂಟಲಿಜೆಂಟ್ ಕಾಲ್ಪನಿಕ ಕೊಠಡಿ.
ಇಲ್ಲಿ internet ಸಮೇತ phone,tab,computer & etc ಇವರುಗಳ ವಾಟ್ಸಪ್ ಗುಂಪುಗಳನ್ನು ಮಾಡಿಕೊಂಡು ಪ್ರತಿದಿನ ಬೆಳಿಗ್ಗೆ 9 ಗಂಟೆಯೊಳಗೆ / ಸಂಜೆ 5 ಗಂಟೆ ನಂತರ webx /zoom/Googlemeet ಬಳಸಿಕೊಂಡು online classes ಮಾಡಬೇಕು.
....
2 ) ಬ್ರಿಲಿಯಂಟ್ ಕಾಲ್ಪನಿಕ ಕೊಠಡಿ
ಇಲ್ಲಿ internet ಸಂಪರ್ಕವಿಲ್ಲದ phone ಗಳಿರುತ್ತವೆ.
ಇಂತಹ ಮಕ್ಕಳಿಗೆ SMS/voice messages ನಿಗದಿಪಡಿಸುದ ವೇಳೆಯಲ್ಲಿ ಮಕ್ಕಳಿಗೆ home assignment ಕೊಟ್ಟು feedback ಪಡೆದುಕೊಳ್ಳಬೇಕು.(call ಮಾಡಿಯಾದರು)
....
3 ) ಜೀನಿಯಸ್ ಕಾಲ್ಪನಿಕ ಕೊಠಡಿ.
ಇಲ್ಲಿ internet ಆಧರಿತ ಯಾವುದೇ ಸಾಧನಗಳಿರುವುದಿಲ್ಲ.
ಇಂತಹ ಮಕ್ಕಳನ್ನು ಗುಂಪುಗಳನ್ನಾಸಿಕೊಂಡು ಕನಿಷ್ಠ ವಾರಕ್ಕೊಂದು ಭಾರಿಯಾರು ಕಡ್ಡಾಯ ಬೇಟೆಮಾಡಿ ಮಕ್ಕಳಿಗೆ ಮುಂದಿನ ವಾರದಲ್ಲಿ ಮಾಡುವ home assignment ಕೊಟ್ಟು ಮಾರ್ಗದರ್ಶನ ನೀಡಬೇಕು.

*ಮಕ್ಕಳನ್ನು ಬೇಟಿಯಾಗುವಾಗ ಸರ್ಕಾರದ SOP ಯಂತೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು.ಕಡ್ಡಾಯವಾಗಿ ಮುಖಗವಸನ್ನು(ಮಾಸ್ಕ)ಧರಿಸಿಕೊಳ್ಳಬೇಕು*

*ಪ್ರತಿ ಮಾರ್ಗದರ್ಶಿ ಶಿಕ್ಷಕರುಗಳಿಗೆ ವಾರಕ್ಕೊಮ್ಮೆ ಮಕ್ಕಳನ್ನು ಬೇಟೆಯಾಗುಂತೆ ವೇಳಾಪಟ್ಟಿ ಹಾಕಿಕೊಳ್ಳಬೇಕಾಗುತ್ತದೆ*

*ಯಾವುದೇ ಕಾರಣಕ್ಕೂ ಶಿಕ್ಷಕರು ಮಗುವನ್ನು /ಮಗು ಶಿಕ್ಷಕರನ್ನು ಏಕಾಂಗಿಯಾಗಿ ಬೇಟಿಯಾಗಬಾರದು*

*ಸಮುದಾಯ/ಹಳೆವಿದ್ಯಾರ್ಥಿಗಳು/ಸ್ವಯಂ ಸೇವಕರು/ SDMC ಪದಾಧಿಕಾರಿಗಳು/ಪಾಲಕರುಗಳನ್ನು ಈ ಕಾರ್ಯದಲ್ಲಿ ತೊಡಗಿಸಿಕೊಳ್ಳಬಹುದು*

 *ಶಿಕ್ಷಕರುಗಳು ತಾವು ಕೈಗೊಂಡ ಪಾಠಪ್ರವಚನಗಳ ದಾಖಲೆಗಳನ್ನುಳಿಸಿಕೊಂಡಿರಬೇಕು*

*ಮಕ್ಕಳಿಗೆ ತಾವು ನೀಡಿದ home assignment/project/science models/etc ಗಳನ್ನು ಪರಿಶೀಲಿಸಿ ರೂಪಣಾತ್ಮಕ ಮೌಲ್ಯಮಾಪನಕ್ಕೆ ಅಂಕಗಳನ್ನು ನೀಡಿ ಅದನ್ನು SATS ನಲ್ಲಿ ದಾಖಲಿಸಬೇಕು*


*ಮುಖ್ಯಶಿಕ್ಷಕರ ಗಮನಕ್ಕೆ*

 *ತಕ್ಷಣವೇ ಇದಕ್ಕೆ ಸಂಬಂಧಿಸಿದಂತೆ intelligent,brilliant& genius ಗುಂಪುಗಳನ್ನು ರಚಿಸಿ ಅವುಗಳ ಪಟ್ಟಿಯನ್ನು ನೀಡಬೇಕು*
[27/7 7:24 ಪೂರ್ವಾಹ್ನ] Crp Eachanal Muktum: *#ವಿದ್ಯಾಗಮ* *ನಿರಂತರ ಕಲಿಕಾ ಕಾರ್ಯಕ್ರಮ* ಬಗ್ಗೆ *ತಮ್ಮ ಹಂತದಲ್ಲಿ ಸಿದ್ಧತೆಗಳನ್ನು ಮಾಡಿಕೊಳ್ಳುವ ಕುರಿತು*

*೧) ಕಾಲ್ಪನಿಕ ಕಲಿಕಾ ಕೋಣೆ:*
# ಪ್ರತಿ ಶಾಲೆಯ ೨೦-೨೫ ಮಕ್ಕಳಿಗೆ ಒಬ್ಬ *ಮಾರ್ಗದರ್ಶಿ ಶಿಕ್ಷಕರನ್ನು* ನೇಮಿಸುವುದು.
# ಮಕ್ಕಳ ಸ್ಥಳ- *ಭೌಗೋಳಿಕ ಪ್ರದೇಶ ಆಧರಿಸಿ* ಗುಂಪು‌ ಮಾಡಬೇಕು.
# ೧-೫,೬-೮,-೧೦ ತರಗತಿಗೆ ಅನುಗುಣವಾಗಿ *ನೆರೆಹೊರೆ ಗುಂಪು* ಮಾಡಬೇಕು.

# *ಕಲಿಕಾ ಸಾಮಗ್ರಿಗಳ ಸಿದ್ದತೆ & ಪೂರೈಕೆ:*, ಸರ್ಕಾರದ ಪ್ರೋತ್ಸಾಹದಾಯಕ‌ ಯೋಜನೆ ಸಾಮಗ್ರಿ ನೆರೆಹೊರೆ ತಂಡಕ್ಕೆ ನೀಡಬೇಕು.
# ತಂಡದಲ್ಲಿ ಸ್ವಕಲಿಕೆಗೆ ಅವಕಾಶ ಕಲ್ಪಿಸಿ‌, ಮಾರ್ಗದರ್ಶನ‌ ನೀಡಬೇಕು.
#ಶೇ ೨೦-೩೫ ರಷ್ಟು ಪಠ್ಯಕ್ರಮ ಕಡಿತಗೊಳಿಸಲಾಗುವುದು ಅದರಂತೆ ರಾಜ್ಯ ಹಂತದಿಂದಲೇ ಯೊಜನೆಯನ್ನು ಸಿದ್ದಪಡಿಸಿ ಅಂತರ್ಜಾಲದಲ್ಲಿ ಬಿಡಲಾಗುವುದು.
# ನೆರೆಹೊರೆ ತಂಡಕ್ಕೆ ಆಹಾರ ಧಾನ್ಯ ಬಿಡುಗಡೆ ಮಾಡಲಾಗುವುದು‌. ಪಾಲಕರೇ ಆಹಾರ ತಯಾರಿಸಿ ಮಕ್ಕಳಿಗೆ ವಿತರಿಸಬೇಕು.

# *ಮಕ್ಕಳ ಮತ್ತು ಮಾರ್ಗದರ್ಶಿ ಶಿಕ್ಷಕರ ಸಂಪರ್ಕದ ರೀತಿ‌ ಮೂರು ಹಂತ.*
# ನೆರೆಹೊರೆ ತಂಡಗಳಲ್ಲಿ ಲಭ್ಯವಿರುವ ತಂತ್ರಜ್ಞಾನ ಸಾಧನಗಳನ್ನಾಧರಿಸಿ ೩ ತಂಡಗಳಲ್ಲಿ ವಿಂಗಡಣೆ ಮಾಡಬಹುದು.
# *ಇಂಟೆಲೆಜೆಂಟ್ ಕೋಣೆ* (ಇಂಟರ್ನೆಟ್ ಸಹಿತ ಕಂಪ್ಯೂಟರ್,ಟ್ಯಾಬ್ ಸ್ಮಾರ್ಟ ಫೋನ್ ಲಭ್ಯಿರುವ ತಂಡ)
# *ಬ್ರಿಲಿಯೆಂಟ್ ಕೋಣೆ* (ಇಂಟರ್ನೆಟ್ ಇಲ್ಲದ ಮೊಬೈಲ್ ಇರುವ ಕೋಣೆ)
# *ಜೀನಿಯಸ್ ಕೋಣೆ*( ಯಾವುದೇ ತಂತ್ರಜ್ಞಾನ ಸಾಧನವಿಲ್ಲದ ಕೋಣೆ).
# ಈ ನೆರೆಹೊರೆ ತಂಡದ ಕೋಣೆಗಳಿಗೆ ಮಾರ್ಗದರ್ಶಿ ಶಿಕ್ಷಕರು ವಾರಕ್ಕೆ ಒಂದು ಸಲ ಕನಿಷ್ಠ ಭೇಟಿ ನೀಡಲೇಬೇಕು.
#ಈ ನೆರೆಹೊರೆ ತಂಡಗಳಿಗೆ ಸ್ವಯಂ ಸೇವಾ ಗುಂಪು ಸಿದ್ದಪಡಿಸಬೇಕು. (ಇವರು ಇದೇ ನೆರೆಹೊರೆ ಪ್ರದೇಶದ ಸ್ಥಳೀಯ ತರುಣ ವಿದ್ಯಾವಂತರು ಆಗಿರಬೇಕು).
#ತಂಡದ ಮಾರ್ಗದರ್ಶಿ ಶಿಕ್ಷಕರ ಮತ್ತು ಸ್ವಯಂ ಸೇವಾ ತಂಡದವರ ಲ್ಯಾಪ್ಟಾಪ್,ಸ್ಮಾರ್ಟ ಫೋನ್ ಬಳಸಿ ಕಲಿಕೆಯನ್ನುಂಟು ಮಾಡಬಹುದು.

# *ಮೂರು ರೀತಿಯ ಕೊಠಡಿ ಹೊರತು ಪಡಿಸಿ ಇದ್ದಲ್ಲಿ ಮಾರ್ಗದರ್ಶಿ ಶಿಕ್ಷಕರು ಮಾಡಬೇಕಾದ ಕಾರ್ಯಗಳು*
# ಕಲಿಕಾ ಅಭ್ಯಾಸದ ಹಾಳೆ ಬಳಸುವುದು.
# ಸ್ಥಳೀಯ ಕಲಿಕಾ ಸಾಮಗ್ರಿಗಳ ಮರುಬಳಕೆ ಮಾಡುವುದು‌.
# ಮಕ್ಕಳ ಮನೆಯ ಆಟಗಳ ಮೂಲಕ ಕಲಿಕೆ ಮಾಡಿಸುವುದು.
# ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಿ ಉತ್ತಮ ಹವ್ವಾಸ ಬೆಳೆಸುವುದು.
# ಓದು,ಬರಹ,ಹಾಡು,ಚಿತ್ರಕಲೆ ಗಳನ್ನು ಮಾಡಿಸಿ ಮಕ್ಕಳಲ್ಲಿ ವಿಶಿಷ್ಠ ಕೌಶಲ್ಯ ವೃದ್ದಿಸುವುದು.
# ಮನೆಯಲ್ಲಿಯ ವಸ್ತುಗಳನ್ನು ಬಳಸಿ ಸುರಕ್ಷಿತವಾದ ವಿಜ್ಞಾನ ಪ್ರಯೋಗ ಮಾಡಿಸುವುದು.
# ಪಠ್ಯಕ್ಕೆ ಪೂರಕವಾದ ಪ್ರೋಜೆಕ್ಟ ವಿದ್ಯಾರ್ಥಿಗಳಿಂದ ಮಾಡಿಸುವುದು.

# *ಭೋದನಾ ಪ್ರಕ್ರಿಯೆಯ ಸ್ವರೂಪ:*
#೧-೫ ತರಗತಿ ತಂಡಗಳಿಗೆ ಮಾರ್ಗದರ್ಶಿ ಶಿಕ್ಷಕರೇ ಎಲ್ಲ ವಿಷಯಗಳನ್ನು ಬೋಧಿಸಬೇಕು.
#೬-೧೦ತರಗತಿ ತಂಡಗಳಿಗೆ ಮಾರ್ಗದರ್ಶಿ ಶಿಕ್ಷಕರು ತಮ್ಮ ವಿಷಯ ಬೋಧಿಸಬೇಕು. ಇತರ ವಿಷಯಗಳಿಗೆ ಇತರ ವಿಷಯ ಶಿಕ್ಷಕರ ಸಮನ್ವಯ ಮಾಡಬೇಕು.
#೬-೧೦ ತರಗತಿ ತಂಡಗಳ ಮಕ್ಕಳಿಗೆ ಕಲಿಕಾ ಸಾಮಗ್ರಿಗಳನ್ನು ಯೋಜನೆ, ಮೌಲ್ಯಮಾಪನ ಸಂಬಂಧಿಸಿದ ಶಿಕ್ಷಕರೇ ಮಾಡಬೇಕು.
# ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ ಆಗಲೇಬೇಕು.
# ವಲಸೆ ಮಕ್ಕಳ ಬಗ್ಗೆಯೂ ಮಾರ್ಗದರ್ಶಿ ಶಿಕ್ಷಕರು ಕಾಳಜಿ‌ಮಾಡಬೇಕು.
# *ಮಾರ್ಗದರ್ಶಿ ಶಿಕ್ಷಕರ ಜವಾಬ್ದಾರಿಗಳು ಅತ್ಯಂತ ಅಮೂಲ್ಯವಾಗಿವೆ.*
 # ಅವೆಲ್ಲವುಗಳನ್ನು ಅತ್ಯಂತ ಉತ್ತಮ ಅನುಷ್ಠಾನ‌ ಮಾಡುವುದರ ಮೂಲಕ ಕಾಲ್ಪನಿಕ ಕಲಿಕಾ ಕೋಣೆಯ ಯಶಸ್ಸು ಅಡಗಿದೆ.
# ಭೌಗೋಳಿಕ ಪ್ರದೇಶ,ತರಗತಿ ಆಧರಿಸಿ ತಂಡಗಳನ್ನು ರಚಿಸಬೇಕ.
# ತಂಡದಲ್ಲಿ ಮೂರು ವಿದದ ವಿಭಿನ್ನ ತಂಡಗಳ ರಚನೆ ಮಾಡಬೇಕು.
#  ತಮ್ಮ‌ನೆರೆಹೊರೆ ತಂಡ ಪ್ರದೇಶದಲ್ಲಿರುವ ೬-೧೪ ವಯಸ್ಸಿನ ಮಕ್ಕಳ ದಾಖಲಾತಿ‌ ಮಾಡಬೇಕು.
# ಮಕ್ಕಳ ಕಲಿಕೆ ಬಗ್ಗೆ, ಮಕ್ಕಳ ಕೃತಿ ಸಂಪುಟ ರಚಿಸಿದ ಬಗ್ಗೆ ತಮ್ಮ ವ್ಯಾಪ್ತಿಯ ಸಿ.ಆರ್.ಪಿ.ಗೆ ಮಾಹಿತಿ ಆಗಾಗ್ಗೆ ನೀಡಬೇಕು.

# *ಸಿಆರ್.ಪಿ. ಬಿಐ ಆರ್ ಟಿ ಗಳ ಜವಾಬ್ದಾರಿಗಳೂ ಇವೆ*: ಇವರು ತಮ್ಮ ವ್ಯಾಪ್ತಿಗೆ ಬರುವ ಎಲ್ಲ ನೆರೆಹೊರೆ ತಂಡಗಳ ಸ್ಥಾಪನೆಗೆ ಸಹಕರಿಸಬೇಕು.
# ಮಾರ್ಗದರ್ಶಿ ಶಿಕ್ಷಕರ ನೇಮಕ ಶಾಲೆಯ  ಮು.ಗು ಅವರಿಂದ ಮಾಡಿಸಬೇಕು.
# ಪಠ್ಯುಸ್ತಕ, ಮಧ್ಯಾಹ್ನ ಉಪಹಾರ ಯೋಜನೆ ಸಾಮಗ್ರಿಗಳನ್ನು ಸರಿಯಾದ ಸಮಯಕ್ಕೆ ತಲುಪಿಸುವುದು.
# ಮಾರ್ಗದರ್ಶಿ ಶಿಕ್ಷಕರಿಗೆ ಮತ್ತು ವಿಷಯ ಶಿಕ್ಷಕರಿಗೆ ಶೈಕ್ಷಣಿಕ ಬೆಂಬಲ ನೀಡುವುದು.
# ಪ್ರತಿ ತಂಡದ ಮಕ್ಕಳ‌ ಕೃತಿ ಸಂಪುಟಗಳನ್ನು ಪರಿಶೀಲಿಸಿ ಮಾರ್ಗರ್ಶನ‌ ನೀಡುವುದು.
# ಕಾಲ್ಪನಿಕ ಕಲಿಕ ತಂಡಗಳು ಸರಿಯಾಗಿ ನಡೆಯುತ್ತಿರುವ ಬಗೆಗೆ ಆಗಾಗ್ಗೆ ಭೇಟಿ ನೀಡಿ ತಾಲೂಕು ಹಂತಕ್ಕೆ ವರದಿ‌ ಮಾಡಬೇಕು.

# *ಬಿಇಓರವರ ಜವಾಬ್ದಾರಿಗಳು:*
# ವಿದ್ಯಾಗಮ ಕಾರ್ಯಕ್ರಮ ಕುರಿತು ಮಾಹಿತಿ ಹಂಚಿಕೆಗೆ ಎಲ್ಲಾ ಮು.ಗು.ಗಳಿಗೆ ತರಬೇತಿ ಆಯೋಜಿಸುವುದು.
# ಶಾಲಾವಾರು *ನೆರೆಹೊರೆ* ತಂಡ ರಚನೆ‌ ಮಾಡಿಸುವುದು.
# ಮೇಲ್ವಿಚಾರಣೆಗೆ ಸಿ ಆರ್ ಪಿ‌, ಬಿ ಆರ್ ಪಿ, ಬಿಐಆರ್ ಟಿ, ಇಸಿಓ ಗಳನ್ನು‌ ನೋಡಲ್ ಅಧಿಕಾರಿಗಳನ್ನಾಗಿ ನೇಮಿಸುವುದು.
# ಪ್ರತಿ ೧೫ ದಿನಗಳಿಗೆ ಒಂದು ತಾಲೂಕು ಹಂತದಲ್ಲಿ ಸಭೆ ಕರೆದು ಪ್ರಗತಿ ಪರಿಶೀಲನೆ ಮಾಡಿ ಜಿಲ್ಲಾ ಹಂತಕ್ಕೆ ವರದಿ‌ ಮಾಡುವುದು.
# ಪ್ರತಿ ನೆರೆಹೊರೆ ತಂಡದ ಮಕ್ಕಳ ಕೃತಿ ಸಂಪುಟ ಸಿದ್ದಪಡಿಸಲು ಪ್ರೇರಣೆ ನೀಡುವುದು.
# ವಿವಿಧ ಇಲಾಖೆಗಳ ಸಹಯೋಗದೊಂದಿಗೆ ವಿದ್ಯಾಗಮ ಕಾರ್ಯಕ್ರಮ ಉತ್ತಮ ಅನುಷ್ಠಾನ ಆಗಲು ಶ್ರಮಿಸಬೇಕು.
# ನಿಗಧಿ ಆಗಿರುವಂತೆ ಅಭ್ಯಾಸ ಚಟುವಟಿಕೆಗಳು ಎಲ್ಲ ಶಿಕ್ಷಕರು ಮಾಡಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು.

# *ಡಯಟ್ ಪ್ರಾಂಶುಪಾಲರು ಮತ್ತು ಹಿರಿಯ,ಕಿರಿಯ ಉಪನ್ಯಾಸಕರುಗಳ ಜವಾಬ್ದಾರಿಗಳು*
# ೩ ತಂಡಗಳಿಗೆ ಮಾರ್ಗಸೂಚಿಯಂತೆ ಸಾಹಿತ್ಯ ಅಭಿವೃದ್ದಿಪಡಿಸಿ ಪ್ರತ್ಯೇಕವಾದ ತರಬೇತಿಯನ್ನು ಆರ್ ಪಿ ಗಳಿಗೆ ಮತ್ತು ಶಿಕ್ಷಕರಿಗೆ ನೀಡಬೇಕು.
#  ಹಿರಿಯ,ಕಿರಿಯ ಉಪನ್ಯಾಸಕರನ್ನು ತಾಲೂಕುಗಳಿಗೆ ನೋಡಲ್ ಅಧಿಕಾರಿಗಳೆಂದು ನೇಮಿಸಬೇಕು.
#ವಿದ್ಯಾರ್ಥಿಗಳು ಪೂರ್ಣಗೊಳಿಸಿದ ಅಭ್ಯಾಸ ಚಟುವಟಿಕೆಗಳ ಅನುಪಾಲನೆಯನ್ನು ಮುಗು,ಶಿಕ್ಷಕರ, ಸಾಮಾಜಿಕ ಜಾಲತಾಣಗಳ ಮೂಲಕ ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಿ ಕಲಿಕೆಯನ್ನು ಖಾತ್ರಿಪಡಿಸಿಕೊಳ್ಳಬೇಕು.
# ನೆರೆಹೊರೆ ತಂಡದ ಮಕ್ಕಳಿಗೆ ನೀಡಿದ ಗೃಹ ಪಾಠಗಳನ್ನು ಮಾರ್ಗದರ್ಶಿ ಶಿಕ್ಷಕರು  ತಿದ್ದುತ್ತಿರುವರೇ ಎಂಬುದನ್ನು ಅವಲೋಕಿಸಬೇಕು‌.
# ಪ್ರತಿ ೧೫ ದಿನಗಳಿಗೆ ಒಂದು ಸಲ ಜಿಲ್ಲೆಯ ಸಮಗ್ರ ಪ್ರಗತಿ ವರದಿಯನ್ನು ನಿರ್ದೇಶಕರು, ಡಿ ಎಸ್ ಇ ಆರ್ ಟಿ ಬೆಂಗಳೂರ ಇವರಿಗೆ ಕಳಿಸಬೇಕು.

# *ಜಿಲ್ಲಾ ಉಪನಿರ್ದೇಶಕರ(ಆಡಳಿತ) ಜವಾಬ್ದಾರಿಗಳು:*
#  ಜಿಲ್ಲೆಯ ಪ್ರತಿಯೊಂದು ಮಗುವಿನ ಕೃತಿ ಸಂಪುಟ ಸಿದ್ದಪಡಿಸಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು.
# ಜಿಲ್ಲೆಯ ಎಲ್ಲ ಶಾಲೆಗಳಿಗೆ ನಿಗಧಿತ ಅನುದಾನ ತಲುಉವಂತೆ ನೋಡಿಕೊಳ್ಳಬೇಕು.
# ಜಿಲ್ಲೆಯಲ್ಲಿ ಸರ್ಕಾರೇತರ ಸಂಘ ಸಂಸ್ಥೆಗಳು, ದಾನಿಗಳು, ಶಿಕ್ಷಣಾಸಕ್ತರು ಗಳನ್ನು ಗುರುತಿಸಿ  ಶಾಲೆಗಳಿಗೆ, ಮಾರ್ಗದರ್ಶಕ ಶಿಕ್ಷರಿಗೆ, ಅಗತ್ಯ ಸೇವೆ ಸೌಲಭ್ಯ ಒದಗಿಸಲು ಸಹಕಾರ ನೀಡಬೇಕು.
# ಡಿಡಿಪಿಐ ರವರು  ಜಿಲ್ಲಾಡಳಿತ,ಜಿಲ್ಲಾ ಪಂಚಾಯತ ಇವರನ್ನು ಸಂಪರ್ಕಿಸಿ ನಗರಾಭಿವೃದ್ದಿ ಇಲಾಖೆ, ಪಂಚಾಯತ ರಾಜ್ ಇಲಾಖೆ,‌ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮುಂತಾದ ಇಲಾಖೆಗಳ  ಸಹಯೋಗದೊಂದಿಗೆ ಗ್ರಾಮ,ವಾರ್ಡ ಮಟ್ಟದಲ್ಲಿ *ವಿದ್ಯಾಗಮ* ಕಾರ್ಯಕ್ರಮಕ್ಕೆ ಅವಶ್ಯ ಸುರಕ್ಷತೆಯನ್ನು ವ್ಯವಸ್ಥೆ ಮಾಡಬೇಕು.
# ಜಿಲ್ಲಾ ಮಟ್ಟದಲ್ಲಿ ಈ *ವಿದ್ಯಾಗಮ* ಕಾರ್ಯಕ್ರಮದ ಬಗ್ಗೆ ವ್ಯಾಪಕ ಪ್ರಚಾರ ನೀಡಿ ಸಮುದಾಯ ಸಂಘಗಳ ಸಹಕಾರ ಪಡೆಯುವುದು.
# ಡಿಡಿಪಿಐ ಕಚೇರಿಯ ಹಂತದಲ್ಲಿ ಶಿಕ್ಷಣಾಧಿಕಾರಿಗಳು , ಡಿವೈಪಿಸಿ, , ಇಓ ಮ ಉ ಯೋ ಎಸ್ ಐ ಅವರನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸುವುದು.
# ಪ್ರತಿ ೧೫ ದಿನಗಳಿಗೆ ಒಂದು ಸಲ ಜಿಲ್ಲೆಯ ಸಮಗ್ರ ಕಲಿಕಾ ಪ್ರಗತಿಯನ್ನು ನಿರ್ದೇಶಕರು,ಡಿ.ಎಸ್.ಇ.ಆರ್.ಟಿ, ನಿರ್ದೇಶಕರು ಪ್ರಾಥಮಿಕ ಶಿಕ್ಷಣ, ಪ್ರೌಢ,ಶಿಕ್ಷಣ ಬೆಂಗಳೂರು ಇವರಿಗೆ ಸಲ್ಲಿಸುವುದು.

# *ಜಿಲ್ಲಾಧಿಕಾರಿಗಳ ಮತ್ತು ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳ ಜವಾಬ್ದಾರಿಗಳು*
# ಈ ಮಹತ್ವಪೂರ್ಣ *ವಿದ್ಯಾಗಮ* ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ವಿವುಧ ಇಲಾಖೆಗಳ ಸಹಕಾರ ಮತ್ತು ಸಹಯೋಗ ನೀಡುವ ಮೂಲಕ ಕಾರ್ಯಕ್ರಮದ ಫಲವು ಪ್ರತಿ‌ಮಗುವಿಗೆ ತಲುಪುವಂತೆ ಕ್ರಮ ವಹಿಸುವುದು‌
# ಈ ವಿದ್ಯಾಗಮ‌ ಕಾರ್ಯಕ್ರಮದ ಪ್ರಾಮುಖ್ಯತೆಯನ್ನು ಜನಪ್ರತಿನಿಧಿಗಳಿಗೆ ಮತ್ತು ಶಿಕ್ಷಣ ಸ್ಥಾಯಿ ಸಮಿತಿಯ ಗಮನಕ್ಕೆ ತಂದು, ಎಲ್ಲರ ಸಹಕಾರ ಪಡೆದು ಕಾರ್ಯಕ್ರಮ ಯಶಸ್ವಿಗೊಳಿಸುವುದು.

ಕಾಮೆಂಟ್‌ಗಳಿಲ್ಲ:

ಪ್ರಚಲಿತ ಪೋಸ್ಟ್‌ಗಳು